Advertisement

ಸ್ಯಾನಿಟೈಸರ್ ವೈರಸ್ ಕೊಲ್ಲಬಹುದಾದ್ರೆ ಮದ್ಯ ಸೇವನೆಯಿಂದಲೂ ವೈರಸ್‌ ಸಾಯಬಹುದಲ್ವ?

01:48 PM May 03, 2020 | Hari Prasad |

ಕೋಟಾ: ಆಲ್ಕೋಹಾಲ್‌ ಆಧಾರಿತ ಸ್ಯಾನಿಟೈಸರ್‌ನಿಂದ ಕೈಯಲ್ಲಿರಬಹುದಾದ ವೈರಸ್‌ ಕೊಲ್ಲುತ್ತದೆ. ಹಾಗಿದ್ದರೆ ಮದ್ಯಪಾನದಿಂದ ಏಕೆ ಕುಡುಕರ ಗಂಟಲಿನೊಳಗಿರುವ ವೈರಸ್‌ ಅನ್ನು ಕೊಲ್ಲಲಾಗುವುದಿಲ್ಲ?’

Advertisement

– ಇದು ಯಾರದ್ದೋ ಮಾತಲ್ಲ. ಜನರನ್ನು ಪ್ರತಿನಿಧಿಸುವ ಶಾಸಕರ ವಾದ. ರಾಜಸ್ಥಾನದಲ್ಲಿ ಬಾರ್‌ ತೆರೆಯಬೇಕು ಎಂಬ ಬಗ್ಗೆ ಕೋಟಾ ಜಿಲ್ಲೆಯ ಕುಂದನಪುರ ಕ್ಷೇತ್ರದ ಶಾಸಕ ಭರತ್‌ ಸಿಂಗ್‌ ಇಂಥ ವಿಚಿತ್ರ ವಾದ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಪತ್ರ ಬರೆದಿದ್ದಾರೆ.

‘ರಾಜಸ್ಥಾನದಲ್ಲಿ ಬಾರ್‌ಗಳನ್ನು ತೆರೆಯಬೇಕು. ಇದರಿಂದ ಕುಸಿದಿರುವ ಆದಾಯ ಮತ್ತೆ ಚೇತರಿಕೆ ಕಾಣುತ್ತದೆ. ಬಂದಂತಾಗುತ್ತದೆ. ಜತೆಗೆ ಕಳ್ಳ ಭಟ್ಟಿ ಕುಡಿದು ಸಾಯುತ್ತಿರುವ ಹಲವಾರು ಜೀವಗಳನ್ನು ಉಳಿಸಿದಂತಾಗುತ್ತದೆ.

ಅಲ್ಕೋಹಾಲ್‌ ಆಧಾರಿತ ಸ್ಯಾನಿಟೈಸರ್‌ನಿಂದ ವೈರಸ್‌ ಕೊಲ್ಲಲು ಸಾಧ್ಯವಾಗುವುದಾದರೆ ಮದ್ಯಪಾನ ಮಾಡುವುದರಿಂದ ಕುಡುಕರ ಗಂಟಲಿನಲ್ಲಿರುವ ವೈರಸ್‌ಗಳು ಏಕೆ ಸಾಯುವುದಿಲ್ಲ?, ಕೇಂದ್ರ ಅಥವಾ ರಾಜ್ಯ ಸರಕಾರ ಈ ವಿಷಯದಲ್ಲಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕೆಂದು’ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅವರಿಗೆ ಸಿಪಿಎಂ ನಾಯಕ, ಭದ್ರಾ ಕ್ಷೇತ್ರದ ಶಾಸಕ ಬಲ್ವಾನ್‌ ಸಿಂಗ್‌ ಕೂಡ ಬೆಂಬಲ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next