Advertisement
ತುಳುವಲ್ಲಿ ಸಿನೆಮಾ ಮಾಡಿದವರು ಕನ್ನಡ ಮಾಡುತ್ತಿದ್ದಾರೆ; ಅಥವಾ ತುಳುವರೇ ಕನ್ನಡ ಸಿನೆಮಾದಲ್ಲಿ ಕಮಾಲ್ ತೋರಿಸುತ್ತಿದ್ದಾರೆ; ಇತರ ಭಾಗದಿಂದ ಬಂದು ತುಳುವ ನೆಲೆಯಲ್ಲಿ ಕಥೆ ಹುಡುಕುತ್ತಿದ್ದಾರೆ ಅಥವಾ ತುಳುವಿನ ಸಾಂಸ್ಕೃತಿಕ ಸೊಗಡು ಕನ್ನಡದಲ್ಲಿ ಮೋಡಿ ಮಾಡುತ್ತಿದೆ… ಹೀಗೆ ನಾನಾ ಕೋನದಲ್ಲಿ ಕೋಸ್ಟಲ್ವುಡ್ ವಿಸ್ತಾರ ರೂಪಕ್ಕೆ ಚಾಚಿಕೊಂಡಿದೆ. ಕರಾವಳಿಯನ್ನೇ ಆಧಾರವಾಗಿಸಿ ತೆರೆಕಂಡ ಸಾಕಷ್ಟು ಸಿನೆಮಾಗಳು ಈಗಾಗಲೇ ಹೆಸರು ಮಾಡಿವೆ. ಮೊನ್ನೆ ಮೊನ್ನೆ ಬಂದ ಪುರುಷೋತ್ತಮನ ಪ್ರಸಂಗ, ಆರಾಟದವರೆಗೆ ಕರಾವಳಿ ಸಿನೆಮಾ ತನ್ನ ಗಡಿ ಮೀರಿ ನಿಂತಿದೆ. ಇಂತಹ ಸಿನೆಮಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
Related Articles
Advertisement
ತುಳುವಿನಲ್ಲಿ ಒಳ್ಳೆ ಸಿನೆಮಾ ಮಾಡುವ ಕಾರಣದಿಂದ ಹಾಗೂ ಕರಾವಳಿ ಭಾಗದ ಪ್ರಾದೇಶಿಕ ಚೆಲುವು, ಕಥೆ, ಭಾಷೆ ಸಮ್ಮಿಳಿತವಾಗಿ ಸಿನೆಮಾ ಮಾಡಿದರೆ ಅಂಥ ಚಿತ್ರಗಳು ಕರಾವಳಿ ಗಡಿ ದಾಟಿಯೂ ಸದ್ದು ಮಾಡಿವೆ. ಉಳಿದವರು ಕಂಡಂತೆ ಮೂಲಕ ರಕ್ಷಿತ್ ಶೆಟ್ಟಿ, ಒಂದು ಮೊಟ್ಟೆಯ ಕಥೆಯ ಮೂಲಕ ರಾಜ್ ಬಿ.ಶೆಟ್ಟಿ, ಸರಕಾರಿ ಶಾಲೆ ಕಾಸರಗೋಡು ಮೂಲಕ ರಿಷಭ್ ಶೆಟ್ಟಿ ಸಹಿತ ಕರಾವಳಿ ಸನ್ನಿವೇಶವನ್ನು ಕರುನಾಡಿಗೆ ವಿಸ್ತರಿಸಿರುವುದು ಪ್ರಾರಂಭಿಕ ಹೆಜ್ಜೆಗಳು. ಬಳಿಕ ಅವರದ್ದೇ ಬೇರೆ ಸಿನೆಮಾ ಹಾಗೂ ಬೇರೆಯವರ ಸಿನೆಮಾಗಳು ಕೋಸ್ಟಲ್ ನೆಲೆಯಿಂದಲೇ ಸೌಂಡ್ ಮಾಡಿವೆ.
-ದಿನೇಶ್ ಇರಾ