Advertisement

ಬಿಸಿಯೂಟದಲ್ಲಿ ಮಕ್ಕಳಿಗೆ ಇಡ್ಲಿ ಸಾಂಬಾರ್‌

11:35 AM Jan 12, 2019 | |

ಭಾಲ್ಕಿ: ಕಲವಾಡಿ ಕ್ಲಸ್ಟರ್‌ನ ಕುರುಬಖೇಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಬಿಸಿಯೂಟ ಯೋಜನೆಯಲ್ಲಿ ಇಡ್ಲಿ, ಚಟ್ನಿ, ಸಾಂಬಾರ್‌ ಸೇವಿಸಿದರು.

Advertisement

ಪ್ರತಿನಿತ್ಯ ಅನ್ನ ಸಾಂಬಾರ್‌ ಮಾತ್ರ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಇಡ್ಲಿ, ಚಟ್ನಿ, ಸಾಂಬಾರ್‌ನ ಉಣ ಬಡಿಸುವ ನಿಟ್ಟಿನಲ್ಲಿ ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲರು ಕ್ರಮ ಕೈಗೊಂಡಿದ್ದು, ಅಡುಗೆ ಸಹಾಯಕರು ಮತ್ತು ಮುಖ್ಯಶಿಕ್ಷಕರ ಮನ ಒಲಿಸಿ, ಪ್ರಾಯೋಗಿಕವಾಗಿ ಕಲವಾಡಿ ಕ್ಲಸ್ಟರ್‌ನ ದಾಡಗಿ ಮತ್ತು ಕುರುಬಖೇಳಗಿ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಇಡ್ಲಿ, ಸಾಂಬಾರ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಮನಸೋ ಇಚ್ಛೆ ಕಾರ್ಯ ನಿರ್ವಹಿಸಿದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. ಪ್ರತಿನಿತ್ಯ ಬರೀ ಅನ್ನ ಸಾರು ಊಟ ಮಾಡುವ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ವಿಭಿನ್ನ ಆಹಾರ ನೀಡುವ ಉದ್ದೇಶ ನಮ್ಮದಾಗಿದೆ. ಒಂದು ವಾರ ಇಡ್ಲಿ ಸಾಂಬಾರ ಮಾಡಿದರೆ ಮತ್ತೂಂದು ವಾರ ಪೂರಿ ಸಾಗು ನೀಡಲಾಗುವುದು ಎಂದು ಹೇಳಿದರು.

ಕಲವಾಡಿ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಗದಗೆಪ್ಪಾ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿ ಷಡಕ್ಷರಿ ಸ್ವಾಮಿ, ಕುರುಬಖೇಳಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಭೂಷಣ ಮಾಮಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಕಾಂಬಳೆ, ಸರ್ಕಾರಿ ಪ್ರೌಢಶಾಲೆ ದಾಡಗಿಯ ಮುಖ್ಯ ಶಿಕ್ಷಕ ಎಂ.ಡಿ. ಹನೀಫ್‌, ಶಿಕ್ಷಕರಾದ ಶಿವಕಾಂತ ಪಾಟೀಲ, ನೀಲಕಂಠ, ಕೃಷ್ಣಾ ಸೊನಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next