Advertisement

ಸಿದ್ದರಾಮಯ್ಯ ಹೇಳಿಕೆಗೆ ಇಬ್ರಾಹಿಂ ತಿರುಗೇಟು

08:18 PM Feb 14, 2023 | Team Udayavani |

ಕೋಲಾರ: ಜೆಡಿಎಸ್‌ಗೆ ಬಹುಮತ ಬರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, “ಸೋಲುವ ಆತಂಕದಲ್ಲಿ ಸಾಯುತ್ತಿರುವ ವ್ಯಕ್ತಿಗೆ ನಿನ್ನ ಕೊನೇ ಆಸೆ ಏನು’ ಎಂದು ಡಾಕ್ಟರ್‌ ಪ್ರಶ್ನಿಸಿದಾಗ ನೀಡುವ ಉತ್ತರದಂತಿದೆ ಎಂದು ಲೇವಡಿ ಮಾಡಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಲ್‌ ಕುರುಬ ವರ್ತೂರು ಪ್ರಕಾಶ್‌, ಬಲಿಷ್ಠ ಜೆಡಿಎಸ್‌ ನಡುವೆ ಯಾರ್ಯಾರೋ ಮಾತು ಕೇಳಿ ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಒಳಗೂ ಬರಲಾಗದೇ, ಹೊರಗೂ ಹೋಗಲಾಗದ ಸೋಲಿನ ಭಯದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಸಿದ್ದರಾಮಯ್ಯ ನನಗೆ ಒಳ್ಳೆ ಸ್ನೇಹಿತರು, ಎಲ್ಲಾದ್ರೂ ಒಳ್ಳೆಯ ಕಡೆ ನಿಂತುಕೊಳ್ಳಲಿ ಎಂದ ಇಬ್ರಾಹಿಂ, ಅವರು ಎಲ್ಲಿ ನಿಲ್ಲಲಿ ಎಂದು ಕೇಳಿದರೆ ಬಹಿರಂಗವಾಗಿ ನಾನು ಹೇಳಲ್ಲ, ಪೋನಿನಲ್ಲಿ ಕೇಳಿದರೆ ಹೇಳುತ್ತೇನೆ ಎಂದರು.
ಚಾಮುಂಡೇಶ್ವರಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದರು. ಆಗಲೂ ನಾನು ನಿಲ್ಲಬೇಡಿ ಅಂತ ಸಲಹೆ ನೀಡಿದ್ದೆ. ಚುನಾವಣೆಗೆ 10 ದಿನ ಇದ್ದಾಗಲೇ ಗೆಲ್ಲುವುದಿಲ್ಲ. ನಾನು ಸೋತುಬಿಡ್ತೀನಿ ಕಣಯ್ಯ ಎಲ್ರೂ ಒಂದಾಗಿದ್ದಾರೆ ಅಂತ ನನ್ನ ಬಳಿ ಹೇಳಿದ್ದರು.

ಧೈರ್ಯ ಬಿಡಬೇಡಿ, ನಾವೆಲ್ಲಾ ಇದ್ದೀವಿ ಅಂತ ಹೇಳಿದ್ದೆ. ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ರೂ. ನಿವೇಶನ ಮಾರಿ 30 ಲಕ್ಷ ರೂ. ಅವರ ಕೈಗೆ ಕೊಟ್ಟಿದ್ದೇನೆ. ನನಗೆ ಆ ವೇಳೆ ಮೂಗಿನಲ್ಲಿ ರಕ್ತ ಬಂದಿತ್ತು. ಅವತ್ತು ನಾನು ದೇವೇಗೌಡರ ಮಾತು ಕೇಳಿದ್ದರೆ ಇವತ್ತು ಸಿದ್ದರಾಮಯ್ಯ ಇರುತ್ತಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next