Advertisement

ಐಎಎಸ್‌ ಪರೀಕ್ಷೆಯಲ್ಲಿ ಫೇಲಾದುದಕ್ಕೆ ನೇಣು ಬಿಗಿದು ಆತ್ಮಹತ್ಯೆ

11:03 AM Feb 27, 2018 | udayavani editorial |

ಹೊಸದಿಲ್ಲಿ  : ಐಎಎಸ್‌ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಹತಾಶನಾದ ಸಾಮ್ರಾಟ್‌ ಚೌಹಾಣ್‌ ಎಂಬಾತ ಬೇರ್‌ ಸರಾಯ್‌ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನ ವರದಿಯಾಗಿದೆ.

Advertisement

ಸಾಮ್ರಾಟ್‌ ಚೌಹಾಣ್‌ ಐಎಎಸ್‌ ಪರೀಕ್ಷೆಯಲ್ಲಿ ಫೇಲಾದ ಕಾರಣ ಖನ್ನತೆಗೆ ಗುರಿಯಾಗಿದ್ದ. ತೀವ್ರ ಹತಾಶೆಯಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆತ ಡೆತ್‌ ನೋಟ್‌ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಸಾವಿನಿಂದ ತೀವ್ರ ಮನನೊಂದಿರುವ ಹರಿ ಓಂ ಅವರು ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ. 

ಮೃತ ದೇಹವನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next