Advertisement
ವಿಚಾರಗೋಷ್ಠಿಯಲ್ಲಿ ಇಂಗ್ಲೆಂಡ್ನ ಆಕ್ಸ್ ಫರ್ಡ್ ವಿವಿಯ ಚರ್ಮರೋಗ ವಿಭಾಗದ ಉಪನ್ಯಾಸಕ ಪ್ರೊ| ಟೆರೆನ್ಸ್ ಜೆ. ರೆಯಾನ್ ಹಾಗೂ ಮಂಗಳೂರು ನಿಟ್ಟೆ ವೈದ್ಯಕೀಯ ವಿವಿಯ ಯುನೆಸ್ಕೋ ಸಂಪನ್ಮೂಲ ಕೇಂದ್ರದ ನಿರ್ದೇಶಕಿ ಪ್ರೊ| ಇಂದ್ರಾಣಿ ಕರುಣಾಸಾಗರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಗುಜರಾತ್ ರಾಜ್ಯದಲ್ಲಿ ಪೈಲೇರಿಯಾ ಮತ್ತು ಲಿಂಪೋಡೆಮಾ ನಿಯಂತ್ರಣ ಸಾಧನೆಗಳ ಬಗ್ಗೆ ಸೂರತ್ ಸರಕಾರಿ ವೈದ್ಯಕೀಯ ಕಾಲೇಜಿನ ಡಾ| ಅಂಜಲಿ ಮೋದಿ ಹಾಗೂ ಲಿಂಪೋಡೆಮಾ ರೋಗ ಹರಡುವಿಕೆ, ಜೀನ್ ಹಾಗೂ ಆಪ್ತ ಸಮಾಲೋಚನೆಯ ಬಗ್ಗೆ ಲಂಡನ್ ಸೈಂಟ್ ಜಾರ್ಜ್ ವಿವಿಯ ಪ್ರೊ| ಸಹರ್ ಮನ್ಸೂರ್ ವಿಚಾರ ಮಂಡನೆ ನಡೆಸಿದರು.
Related Articles
Advertisement
ಪ್ರೊ| ಇಂದಿರಾ ಕರುಣಾಸಾಗರ್ ಮತ್ತು ಜೈಪುರ ಜಾಮ್ನಗರದ ಆಯುರ್ವೇದ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ| ಎಂ.ಎಸ್. ಬಗೇಲ್ ಸಂಯೋಜಕರಾಗಿ ಸಹಕರಿಸಿದರು. ಸಂಜೆ ಆಯುರ್ವೇದದಲ್ಲಿ ರೋಗ ಲಕ್ಷಣದ ಹಿನ್ನೆಲೆಯ ಚಿಕಿತ್ಸೆಯ ಬಗ್ಗೆ ಹಾಸನದ ಎಸ್ಡಿಎಂ ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಉಪನ್ಯಾಸಕ ಪ್ರೊ| ಗಿರೀಶ್ ಕೆ.ಜೆ. ಅವರು ಉಪನ್ಯಾಸ ನೀಡಿದರು. ಡಾ| ಗುರುಪ್ರಸಾದ್ ಅಗ್ಗಿತ್ತಾಯ ಸಂಯೋಜಕರಾಗಿ ಭಾಗವಹಿಸಿದರು.
ಇಂಗ್ಲೆಂಡ್ನ ರೋಯಲ್ ಡಬೇì ಆಸ್ಪತ್ರೆಯ ಕಟೇ ರಿಚಸ್ ಅವರು ಮೊಲೆ ಕ್ಯಾನ್ಸರ್ ಲಿಂಪೋಡೆಮಾದಲ್ಲಿ ಅಧ್ಯಯನ, ಚಿಕಿತ್ಸೆಗಳ ಬಗ್ಗೆ ಉಪನ್ಯಾಸ ನೀಡಿದರು. ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ| ಸುರೇಶ್ ರಾವ್ ಸಂಯೋಜಕರಾಗಿ ಭಾಗವಹಿಸಿದರು. ಈ ಸಂದರ್ಭ ನ್ಯೂಯಾರ್ಕ್ ಕ್ಯಾನ್ಸರ್ ಸೆಂಟರ್ಸಹಾಯಕ ಪ್ರಾಧ್ಯಾಪಕ ಡಾ| ಶಾಮ್ ಮಾಯಿಲಂಕೋಡಿ ಅವರೊಂದಿಗೆ ಸಂವಾದ ನಡೆಯಿತು.
ಸೂರತ್ ಮುನ್ಸಿಪಲ್ ಕಾರ್ಪೋರೇಶನ್ಅಧಿಕಾರಿ ಡಾ| ಕೇಶವ್ ಜಿ.ವಿಷ್ಣುವ್ ಅವರು ಲಿಂಪೋಡೆಮಾ ನಿರ್ವಹಣೆ ಮತ್ತು ಅನುಭವಗಳ ಬಗ್ಗೆ ಮಾತನಾಡಿದರು. ಡಾ| ರಿಯಾ ರೊಸೆಲಿನ್ ಯೋಟ್ಸು ಸಂಯೋಜಕರಾಗಿ ಸಹಕರಿಸಿದರು. ಡಾ| ನಾರಾಯಣ ಪ್ರದೀಪ್, ಐಎಡಿ ನಿರ್ದೇಶಕ ಡಾ| ಎಸ್. ಆರ್. ನರಹರಿ, ಡಾ| ಪ್ರಸನ್ನಾ ಕೆ.ಎಸ್., ಡಾ| ಗುರುಪ್ರಸಾದ್ ಅಗ್ಗಿತ್ತಾಯ, ಶ್ರುತಿ ಮೋಳ್ ಮೊದಲಾದವರು ಭಾಗವಹಿಸಿ ಚರ್ಚೆ ನಿರ್ವಹಿಸಿದ್ದರು.
ಐಎಡಿಯ ವಿಚಾರ ಸಂಕಿರಣ ನಡೆಯಿತು.