Advertisement

ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ

12:58 AM May 31, 2019 | Lakshmi GovindaRaj |

ಕೋಲ್ಕತಾ: ಬಿಜೆಪಿಯನ್ನು ನಾನು ದ್ವೇಷಿಸುತ್ತೇನೆ. ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಪ್ರಧಾನಿ ಮೋದಿ ಪ್ರಮಾಣ ಸ್ವೀಕಾರಕ್ಕೆ ತೆರಳುವಾಗಿ ನಂತರ ಗೈರು ಹಾಜರಾಗಿರುವ ದೀದಿ, ನೈಹತಿ ಮುನಿಸಿಪಾಲಿಟಿ ಎದುರು ಗುರುವಾರ ಧರಣಿ ಕೂತಿದ್ದ ಮಮತಾ ಈ ರೀತಿ ಹೇಳಿಕೆ ನೀಡಿದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿಂಸಾಕೃತ್ಯ ನಡೆಸಿದೆ ಎಂದು ಆರೋಪಿಸಿರುವ ಅವರು, ನೈಹಾತಿಯಲ್ಲಿ ನಡೆದ ಗಲಭೆಯಲ್ಲಿ ಟಿಎಂಸಿ ಕಾರ್ಯಕರ್ತರು ನಿರಾಶ್ರಿತರಾಗಿದ್ದಾರೆ ಎಂದು ದೂರಿದರು. ಈ ವೇಳೆ ಭಾವನಾತ್ಮಕವಾಗಿ ಭಾಷಣ ಮಾಡಿದ ಮಮತಾ ನಾನು ಬಿಜೆಪಿಯನ್ನು ದ್ವೇಷಿಸುತ್ತೇನೆ.

ಬಂಗಾಳದ ಸಂಸ್ಕೃತಿಯನ್ನು ಗೌರವಿಸಿ. ನೀತಿ ಸಂಹಿತೆಯ ಅನುಕೂಲವನ್ನು ಕೆಲವು ಗೂಂಡಾಗಳು ಪಡೆದುಕೊಂಡಿದ್ದಾರೆ. ನಾನು ಅವರನ್ನು ಬಿಡುವುದಿಲ್ಲ, ನಾನು ಮೋದಿ ಅಥವಾ ಕೇಂದ್ರ ಸರ್ಕಾರದ ನೆರಳಿನಲ್ಲಿ ಬದುಕುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next