Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿಜಯಪುರದಲ್ಲಿ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ರಾಘವೇಂದ್ರ ಹಿಟ್ನಾಳ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಪಕ್ಷ ಹೇಳಿದರೆ ನಾವು ಪಾಲಿಸಬೇಕಾಗುತ್ತದೆ. ಆದರೆ ಈಗ ಸದ್ಯ ಅಂತಹ ಚರ್ಚೆಯೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಿಸುವ ಟಾರ್ಗೆಟ್ ನೀಡಲಾಗಿದೆ ಎಂದರು.
Related Articles
Advertisement
ಹಿರಿಯರಾದ ಬಸವರಾಜ ರಾಯರಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಅಸಮಾಧಾನವಾಗಿಲ್ಲ. ಆದರೆ ನಾವೆಲ್ಲ ಈಗ ಅಧಿಕಾರಕ್ಕೆ ಬಂದಿದ್ದೇವೆ. ಅವರು ನಮಗೆ ಸಲಹೆ ನೀಡುತ್ತಿದ್ದಾರೆ. ರಾಯರಡ್ಡಿಯವರು ನಮ್ಮ ಲೀಡರ್, ಅವರು ಸಲಹೆ ಕೊಡುತ್ತಾರೆ ಎಂದರು.
ಎಸ್ ಸಿಪಿ, ಟಿಎಸ್ ಪಿ ಹಣವನ್ನು ನಾವು ಬೇರೆಯದಕ್ಕೆ ಬಳಸಿಲ್ಲ. ಶಕ್ತಿ ಯೋಜನೆಯಲ್ಲಿ ಈ ಹಣ ಬಳಸಿಕೊಳ್ಳಲು ಅವಕಾಶವಿದೆ ಬಳಸಿಕೊಳ್ಳಲಾಗಿದೆ. ಬಿಜೆಪಿಯವರು ಪ್ರತಿಭಟನೆ ಮಾಡುವುದೇ ಕೆಲಸ ಅದನ್ನು ಅವರು ಮುಂದುವರಿಸಲಿ ಎಂದರು.
ಗ್ಯಾರಂಟಿ ಯೋಜನೆಯು ಎಂಪಿ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ. ಲೋಕಸಭೆಯಲ್ಲಿ ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಧೂಳಿಪಟವಾಗುತ್ತಿದೆ. ಇದೇ ಕಾರಣ ಮೋದಿಯವರಿಗೆ ಈಗ ಭಯವಾಗಿದೆ. ನಮ್ಮ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ಗ್ಯಾರಂಟಿ ಯೋಜನೆ ಘೋಷಣೆಯಾಗಲಿವೆ ಎಂದರು.
ಕುಮಾರಸ್ವಾಮಿ ಅವರಿಗೆ ಈಗ ಕೆಲಸವಿಲ್ಲ. ಯಾವ ಕಡೆ ಬಂದರೂ ನಾನೇ ಎಂದುಕೊಂಡಿದ್ದರು. ಆದರೆ ವರ್ಗಾವಣೆ ಮಾಡುವದನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲ ಸರ್ಕಾರದಲ್ಲಿ ವರ್ಗಾವಣೆಯು ಸಹಜ ಕಾರ್ಯ ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡರು.