Advertisement

ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವೆ

10:52 PM Nov 17, 2019 | Team Udayavani |

ಬೆಂಗಳೂರು: ವೈಯಕ್ತಿಕ ಕಾರಣಗಳಿಂದ ಪಕ್ಷದ ಸಭೆಗಳಿಗೆ ಹಾಜರಾಗಲು ಆಗುತ್ತಿಲ್ಲ. ಉಪ ಚುನಾವಣೆ ಯಲ್ಲಿ ಪಕ್ಷ ವಹಿ ಸುವ ಜವಾ ಬ್ದಾರಿಯನ್ನು ನಿರ್ವ ಹಿಸುವೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಭಾನುವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಕಾಂಗ್ರೆಸ್‌ ನಾಯಕರಿಗೆ ನನ್ನ ಪರಿಸ್ಥಿತಿ ಗೊತ್ತಿದೆ. ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಏನೆಲ್ಲ ಸಾಧ್ಯವೋ ನನ್ನ ಶಕ್ತಿ ಮೀರಿ ಮಾಡುತ್ತೇನೆ.

Advertisement

ನನ್ನ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದರು. ಇದೇ ವೇಳೆ, ಬೆಳಗಾವಿ ರಾಜ ಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರು ಎಂದು ರಮೇಶ್‌ ಜಾರಕಿಹೊಳಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅವರೆಲ್ಲ ದೊಡ್ಡವರು. ಅವರ ಸುದ್ದಿ ನನಗೆ ಬೇಡ ಎಂದು ಹೇಳಿದರು.

ಉಪ ಚುನಾವಣೆಗೆ “ಕೈ’ವೀಕ್ಷಕರ ನೇಮಕ
ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ವೀಕ್ಷಕರನ್ನು ನೇಮಕ ಮಾಡಿದೆ. ಅಥಣಿ, ಕಾಗವಾಡ-ಎಐಸಿಸಿ ಕಾರ್ಯದರ್ಶಿ, ಎಸ್‌.ಎ.ಸಂಪತ್‌ಕುಮಾರ್‌, ಗೋಕಾಕ್‌, ಯಲ್ಲಾಪುರ-ಎಐಸಿಸಿ ಕಾರ್ಯದರ್ಶಿ, ವಂಶಿಚಂದ ರೆಡ್ಡಿ, ಹಿರೆಕೆರೂರ, ರಾಣೆಬೆನ್ನೂರು-ಪೊನ್ನಂ ಪ್ರಭಾಕರ, ಮಾಜಿ ಸಂಸದ, ಚಿಕ್ಕಬಳ್ಳಾಪುರ, ಹೊಸಕೋಟೆ-ಎಂ.ಎಂ. ಪಲ್ಲಂರಾಜು-ಮಾಜಿ ಸಂಸದ, ಕೆ.ಆರ್‌.ಪುರ,

ಶಿವಾಜಿನಗರ-ಮಯೂರ ಜಯಕುಮಾರ್‌, ತಮಿಳುನಾಡು ಪಿಸಿಸಿ ಕಾರ್ಯಾಧ್ಯಕ್ಷ, ಕೆ.ಆರ್‌.ಪೇಟೆ, ಹುಣಸೂರು-ವಿಶ್ವನಾಥನ್‌, ಮಾಜಿ ಸಂಸದ, ಮಹಾಲಕ್ಷ್ಮೀ ಲೇಔಟ್‌, ಯಶವಂತಪುರ-ಸಂಜೀವ್‌ ಜೋಸೆಫ್, ಪ್ರಧಾನ ಕಾರ್ಯದರ್ಶಿ, ಕೇರಳ ಪಿಸಿಸಿ, ವಿಜಯನಗರ-ಎನ್‌. ತುಳಿಸಿ ರೆಡ್ಡಿ, ಮಾಜಿ ಸಂಸದ, ಹಾಗೂ ಎಐಸಿಸಿ ಕಾರ್ಯದರ್ಶಿ ಜೆ.ಡಿ. ಶೀಲಂ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next