Advertisement

ಪಂಚಕುಲ ಮಾಸ್ಟರ್‌ ಮೈಂಡ್‌ ನಾನೇ: ಹನಿಪ್ರೀತ್‌ ತಪ್ಪೊಪ್ಪಿಗೆ

11:37 AM Oct 11, 2017 | Team Udayavani |

ಚಂಡೀಗಢ : 38 ಜೀವಗಳನ್ನು ಬಲಿಪಡೆದಿದ್ದ ಪಂಚಕುಲ ಹಿಂಸೆಯ ಮಾಸ್ಟರ್‌ ಮೈಂಡ್‌ ನಾನೇ ಎಂದು ಡೇರಾ ಮುಖ್ಯಸ್ಥ ಗುರುಮೀತ್‌ ರಾಮ್‌ ರಹೀಮ್‌ ಸಿಂಗ್‌ನ ವಿವಾದಾತ್ಮಕ ದತ್ತು ಪುತ್ರಿ ಹನಿಪ್ರೀತ್‌ ಸಿಂಗ್‌ ಒಪ್ಪಿಕೊಂಡಿರುವುದಾಗಿ ಆಕೆಯನ್ನು ಪ್ರಶ್ನಿಸುತ್ತಿರುವ ಹರಿಯಾಣ ಪೊಲೀಸ್‌ನ ಎಸ್‌ಐಟಿ ತಂಡ ಹೇಳಿದೆ.

Advertisement

ಪಂಚಕುಲದಲ್ಲಿ ಹಿಂಸೆಯನ್ನು ಸೃಷ್ಟಿಸುವ ಹೊಣೆಗಾರಿಕೆಯನ್ನು ಡೇರಾ ಕಾರ್ಯಕರ್ತರಿಗೆ ನೀಡಲಾಗಿತ್ತು ಮತ್ತು ಅದಕ್ಕಾಗಿ ಹಣವನ್ನು ಪಾವತಿಸುವಂತೆಯೂ ಸೂಚಿಸಲಾಗಿತ್ತು ಎಂದಾಕೆ ಹೇಳಿದ್ದಾಳೆ.

ಪಂಚಕುಲ ಹಿಂಸೆ ಮತ್ತು ಡೇರಾ ಅಕ್ರಮಗಳ ಕುರಿತಾದ ಎಲ್ಲ ಮಾಹಿತಿಗಳು ಹನಿಪ್ರೀತ್‌ ಳ ಲ್ಯಾಪ್‌ ಟಾಪ್‌ನಲ್ಲಿ ದಾಖಲಾಗಿದ್ದು ತಾವು ಅದನ್ನು ಶೀಘ್ರವೇ ವಶಪಡಿಸಿಕೊಳ್ಳಲಿದ್ದೇವೆ ಎಂದು ಹರಿಯಾಣ ಪೊಲೀಸರು ಕೋರ್ಟಿಗೆ ತಿಳಿಸಿದ್ದಾರೆ.

ಆಗಸ್ಟ್‌ 25ರಂದು ಪಂಚಕುಲದಲ್ಲಿ ಹಿಂಸೆಯನ್ನು ಭುಗಿಲೇಳಿಸಬೇಕೆಂಬ ನಿರ್ಧಾರವನ್ನು ಆಗಸ್ಟ್‌ 17ರ ಡೇರಾ ಸಭೆಯಲ್ಲಿ ಕೈಗೊಳ್ಳಲಾಗಿತ್ತು. 2002ರ ರೇಪ್‌ ಕೇಸ್‌ ನಲ್ಲಿ ಡೇರಾ ಮುಖ್ಯಸ್ಥ ಗುರುಮೀತ್‌ ರಾಮ್‌ ರಹೀಮ್‌ ಸಿಂಗ್‌ ಅಪರಾಧಿಯೆಂದು ಕೋರ್ಟ್‌ ಘೋಷಿಸುವುದಕ್ಕೆ ಮುನ್ನ ಪಂಚಕುಲದಲ್ಲಿ  ಹಿಂಸೆ ಭುಗಿಲೇಳಿಸಲು ನಿರ್ಧರಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next