Advertisement

ಬಿಬಿಸಿ ವಿರುದ್ಧ ಐಟಿ ಕ್ರಮ ಭಾರತದ ಪ್ರತಿಷ್ಠೆಗೆ ಅಡ್ಡಿ: ಕಾಂಗ್ರೆಸ್ ಆಕ್ರೋಶ

05:28 PM Feb 15, 2023 | Team Udayavani |

ನವದೆಹಲಿ : ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆಯನ್ನು ಖಂಡಿಸಿರುವ ಕಾಂಗ್ರೆಸ್, ದೇಶವು ಜಿ-20 ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂತಹ ಕ್ರಮಗಳ ಮೂಲಕ ಭಾರತದ ಯಾವ ಚಿತ್ರಣವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬುಧವಾರ ಪ್ರಶ್ನಿಸಿದೆ.

Advertisement

ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಪ್ರಧಾನಿ ಮೋದಿ ಅವರ ಹಿಂದಿನ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ದಾಳಿ ಮಾಡಲಾಗುತ್ತದೆ ಮತ್ತು ಸರಕಾರವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಕೆಡವಿದೆ ಎಂದು ಆರೋಪಿಸಿದ್ದಾರೆ.

ಬಿಬಿಸಿ ಇಂಡಿಯಾ ವಿರುದ್ಧದ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕಾರ್ಯಾಚರಣೆ ಬುಧವಾರ ಎರಡನೇ ದಿನವೂ ಮುಂದುವರಿದಿದ್ದು, ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಪೇಪರ್ ಆಧಾರಿತ ಹಣಕಾಸು ದತ್ತಾಂಶದ ನಕಲುಗಳನ್ನು ಪತ್ತೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಸರಕಾರವು ಪದೇ ಪದೇ ಭಾರತೀಯ ಮಾಧ್ಯಮಗಳ ಕತ್ತು ಹಿಸುಕಿದೆ,ಮೂಗು ತೂರಿಸಿದೆ ಮತ್ತು ಬುಲ್ಡೋಜರ್ ಮಾಡಿದೆ”, ಏಕೆಂದರೆ ಅವುಗಳಲ್ಲಿ ಕೆಲವು, ಬಹಳ ಕಡಿಮೆ ಸಂಖ್ಯೆಯು ಬಿಜೆಪಿಯ ನೀತಿಯನ್ನು ಅನುಸರಿಸಲು ನಿರಾಕರಿಸಿದೆ ಎಂದು ಅವರು ಆರೋಪಿಸಿದರು.

“ಮೋದಿ ಜಿ ಅವರು ದೇಶದ ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿದ್ದಾಗ, ಅವರು ಅದೇ ಬಿಬಿಸಿಯ ಸಮರ್ಪಿತ ಅನುಯಾಯಿಯಾಗಿದ್ದರು” ಎಂದು ಖೇರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next