Advertisement

ದೇವಸ್ಥಾನದ ವಸ್ತುಗಳನ್ನು ಕದ್ದು ಪಶ್ಚಾತ್ತಾಪ: ಮರಳಿ ಇಟ್ಟು ಪತ್ರ ಬರೆದ ಕಳ್ಳ.!

05:44 PM Oct 31, 2022 | Team Udayavani |

ಮಧ್ಯಪ್ರದೇಶ: ದೇವಸ್ಥಾನದಿಂದ ಅಮೂಲ್ಯವಾದ ಸಾಮಗ್ರಿಗಳನ್ನು ಕದ್ದೊಯ್ದ ಕಳ್ಳನೊಬ್ಬ ಮನ ಪರಿವರ್ತನೆಯಾಗಿ ಕದ್ದ ವಸ್ತುಗಳನ್ನು ಮತ್ತೆ ತಂದಿಟ್ಟ ಘಟನೆ ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ನಡೆದಿದೆ.

Advertisement

ಅ.24 ರಂದು ಬಾಲಘಾಟ್ ನ ಲ್ಯಾಮ್ಟಾ ಪ್ರದೇಶದ ಜೈನ ದೇವಸ್ಥಾನದಿಂದ ಅಮೂಲ್ಯ ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದಾದ ನಾಲ್ಕು ದಿನಗಳ ಬಳಿಕ ಯಾವುದೇ ಆರೋಪಿ ಪತ್ತೆಯಾಗದೆ, ದೇವಸ್ಥಾನದ ಬಳಿಯಿರುವ ಹೊಂಡವೊಂದರಲ್ಲಿ ಬ್ಯಾಗ್‌ ನಲ್ಲಿ ಸುತ್ತಿಟ್ಟ ಹಾಗೆ ಕಾಣೆಯಾದ ದೇವಸ್ಥಾನದ ಅಮೂಲ್ಯವಾದ ಸಾಮಾಗ್ರಿಗಳು ಪತ್ತೆಯಾಗಿವೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಬ್ಯಾಗ್‌ ನಲ್ಲಿದ್ದ ದೇವಸ್ಥಾನದಿಂದ ಕಳ್ಳತನವಾದ ಬೆಳ್ಳಿ ಹಾಗೂ ತಾಮ್ರದ ಸಾಮಾಗ್ರಿಗಳೊಂದಿಗೆ ಕಳ್ಳ ಬರೆದಿಟ್ಟ ಪತ್ರ ಸಿಕ್ಕಿದೆ.

“ಅಪರಾಧವನ್ನು ಮಾಡಿದ ನಂತರ ನಾನು ತುಂಬಾ ಕಷ್ಟವನ್ನು ಅನುಭವಿಸಿದೆ ಮತ್ತು ಅದಕ್ಕಾಗಿಯೇ ನಾನು ಈ ವಸ್ತುಗಳನ್ನು ಹಿಂದಿರುಗಿಸುತ್ತಿದ್ದೇನೆ. ಈ ವಸ್ತುಗಳನ್ನು ಕದ್ದಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ.” ಎಂದು ಪತ್ರದಲ್ಲಿ ಬರೆದ ಬರಹವನ್ನು ಕಂಡು ಪೊಲೀಸರು ಅಚ್ಚರಿಗೊಂಡಿದ್ದಾರೆ.

Advertisement

ಸ್ಥಳೀಯರು ದೇವಸ್ಥಾನದ ಸಾಮಗ್ರಿ ಮರಳಿ ಬಂದಿರುವುದಕ್ಕಾಗಿ ಸಂತಸಗೊಂಡಿದ್ದಾರೆ. ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next