Advertisement

ಟೋಲ್ ವಿನಾಯಿತಿಗೆ ಒತ್ತಡ ಹಾಕುತ್ತೇನೆ: ನಳಿನ್‌

01:35 AM Jul 21, 2019 | Team Udayavani |

ಮಂಗಳೂರು: ಸುರತ್ಕಲ್ಟೋಲ್ ಕೇಂದ್ರದಲ್ಲಿ ಸ್ಥಳೀಯರಿಂದ ಸುಂಕ ವಸೂಲಿ ಮಾಡದಂತೆ ಎನ್‌ಎಚ್ಎಐ ಮೇಲೆ ಒತ್ತಡ ಹಾಕಲಾಗು ವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಕೇಂದ್ರದ ಜತೆ ವಿಲೀನ ಇಲ್ಲವೇ ರದ್ದು ಮಾಡುವ ಪ್ರಸ್ತಾವವನ್ನು ಈಗಾಗಲೇ ಬೆಂಗಳೂರಿನಲ್ಲಿ ಹೆದ್ದಾರಿ ಇಲಾಖೆಯ ಪ್ರಮುಖ ಸಭೆಗಳಲ್ಲಿ ಮಂಡಿಸಿದ್ದೇನೆ. ಅಲ್ಲದೆ ಈ ಸಂಬಂಧ ಪತ್ರವನ್ನೂ ಬರೆಯ ಲಾಗಿದೆ. ಈಗ ಮತ್ತೆ ಖಾಸಗಿ ಸ್ಥಳೀಯ ವಾಹನಗಳಿಂದ ಟೋಲ್ ಪಡೆಯುವ ಬಗ್ಗೆ ಮಾಹಿತಿ ಬಂದಿದೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ದಿಲ್ಲಿಯಲ್ಲಿ ಎನ್‌ಎಚ್ಎಐ ಚೇರ್‌ಮನ್‌ ಅವರನ್ನು ಸಂಪರ್ಕಿಸಿ ಸ್ಥಳೀಯರಿಂದ ಸುಂಕ ವಸೂಲಿ ಮಾಡದಂತೆ ಸೂಕ್ತ ಮತ್ತು ಅಧಿಕೃತ ನಿರ್ದೇಶನ ಕೊಡಿಸಲಾಗುವುದು ಎಂದವರು ತಿಳಿಸಿದ್ದಾರೆ.

ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಟೋಲ್ ಕೇಂದ್ರದ ಗುತ್ತಿಗೆದಾರರನ್ನು ಕರೆದು ತಾತ್ಕಾಲಿಕವಾಗಿ ಸುಂಕ ವಸೂಲಿ ಮಾಡಬಾರದು ಎಂದು ಸೂಚಿಸಿದ್ದೇನೆ ಎಂದವರು ಪ್ರಕಟನೆ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next