Advertisement

ಮಂಡ್ಯ ರೈತರು, ನೀರಿನ ಸಮಸ್ಯೆ ಬಗೆಹರಿಸುವೆ, ಇದು ಸ್ವಾಭಿಮಾನದ ಜಯ: ಸುಮಲತಾ

09:58 AM May 30, 2019 | Nagendra Trasi |

ಮಂಡ್ಯ:ಮಂಡ್ಯ ಜಿಲ್ಲೆಯ 20 ಲಕ್ಷ ಜನರು ನಮ್ಮವರೇ. ದ್ವೇಷ ಸಾಕು, ಸಹಕಾರ ಕೊಡಿ. ಇನ್ಮುಂದೆ ಒಗ್ಗಟ್ಟಾಗಿ ಹೋರಾಡಿ ಸಮಸ್ಯೆಯನ್ನು ಬಗೆಹರಿಸೋಣ. ಕುಡಿಯುವ ನೀರಿನ ಸಮಸ್ಯೆ, ಜನರ ಸಮಸ್ಯೆ, ರೈತರ ಸಮಸ್ಯೆಯನ್ನು ಬಗೆಹರಿಸುವೆ. ಸ್ವಲ್ಪ ಸಮಯ ಕೊಡಿ. ಇದು ನನ್ನ ಗೆಲುವಲ್ಲ, ಜನರ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು.

Advertisement

ಬುಧವಾರ ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮಂಡ್ಯ ಜನತೆಗಾಗಿ ಆಯೋಜಿಸಿದ್ದ ಕೃತಜ್ಞತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ನನ್ನ ಪರ ನಿಂತು ದುಡಿದ ಪ್ರತಿಯೊಬ್ಬರ ಗೆಲುವು ಇದಾಗಿದೆ. ನನ್ನ ಬಗ್ಗೆ ಪ್ರೀತಿ ತೋರಿಸಿ, 52 ವರ್ಷದ ನಂತರ ಸ್ವತಂತ್ರ ಅಭ್ಯರ್ಥಿಯನ್ನು ಗೆಲ್ಲಿಸಿ ಇತಿಹಾಸ ಸೃಷ್ಟಿಸಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ 222 ಮಹಿಳಾ ಅಭ್ಯರ್ಥಿಗಳಲ್ಲಿ ಗೆಲುವು ಸಾಧಿಸಿದ್ದು, ಮಂಡ್ಯದ ಸುಮಲತಾ ಮಾತ್ರ. ಈ ಗೆಲುವು ಮಂಡ್ಯದ ಜನತೆಯ ಸ್ವಾಭಿಮಾನದ ಜಯ, ಹೀಗಾಗಿ 8 ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next