Advertisement

ನಾನು ಸಚಿವ ಅನ್ನೋದೆ ನಿಮಗೆ ಇನ್ನೂ ಗೊತ್ತಿಲ್ಲ ಅನಿಸುತ್ತಿದೆ: ಜಿ. ಪರಮೇಶ್ವರ್‌

11:23 PM Jun 14, 2024 | Team Udayavani |

ಕೊರಟಗೆರೆ(ತುಮಕೂರು): “ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ಆಯೋಜನೆ ಮಾಡುತ್ತೀರಾ? ನಾನು ಸಚಿವ ಅನ್ನೋದು ನಿಮಗೆ ಇನ್ನೂ ಗೊತ್ತಿಲ್ಲ ಅನ್ಸುತ್ತೆ. ಇನ್ನೂ ಶಾಸಕ ಅಂದುಕೊಂಡೇ ಇದ್ದಿಯಾ ಅಲ್ವಾ?’ ಎಂದು ಡಿಡಿಪಿಐ ಹಾಗೂ ಬಿಇಒ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ| ಜಿ.ಪರಮೇಶ್ವರ್‌ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ಹುಲಿಕುಂಟೆ ಮತ್ತು ಜೆಟ್ಟಿಅಗ್ರಹಾರ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಶಾಲೆಗಳಲ್ಲಿ ಕಾಟಾಚಾರಕ್ಕೆ ಶಿಕ್ಷಣ ಇಲಾಖೆ ಕಾರ್ಯಕ್ರಮ ಆಯೋಜಿಸುತ್ತೀರಿ. ಅಮಾನತು ಮಾಡಿ ಮನೆಗೆ ಕಳಿಸಿದರೆ ಗೊತ್ತಾಗುತ್ತದೆ ಎಂದು ಡಿಡಿಪಿಐ ಮಂಜುನಾಥ ಮತ್ತು ಬಿಇಒ ನಟರಾಜು ಅವರಿಗೆ ಸಚಿವರು ಎಚ್ಚರಿಕೆ ನೀಡಿದರು.

ನಾನೂ 5 ವರ್ಷ ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡಿದ್ದೀನಿ. 2025ರಲ್ಲಿ ಮತ್ತೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಇದೇ ಫ‌ಲಿತಾಂಶ ಬಂದರೆ ಅಮಾನತು ಮಾಡುವುದೊಂದೇ ಮಾರ್ಗ. ಗುಣಮಟ್ಟದ ಶಿಕ್ಷಣ ವಿಚಾರದಲ್ಲಿ ನಿರ್ಲಕ್ಷ ವಹಿಸುವ ಶಿಕ್ಷಕರನ್ನು ಅಮಾನತು ಮಾಡುವಂತೆ ಜಿಪಂ ಸಿಇಒಗೆ ಸಚಿವರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next