Advertisement

Dandeli; ದಾಂಡೇಲಿಯ ಹಿರಿಯ ಚೇತನ ಐ.ಪಿ.ಘಟಕಾಂಬಳೆ ವಿಧಿವಶ

09:29 AM Mar 21, 2024 | Team Udayavani |

ದಾಂಡೇಲಿ : ಹಿರಿಯ ಚೇತನ, ದಾಂಡೇಲಿಯ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಎಂಪ್ಲಾಯಿಸ್ ಯೂನಿಯನಿನ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷರೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೂ ಆಗಿರುವ ಐ.ಪಿ.ಘಟಕಾಂಬಳೆಯವರು ಗುರುವಾರ ನಸುಕಿನ ವೇಳೆಯಲ್ಲಿ ವಿಧಿವಶರಾಗಿದ್ದಾರೆ. ಮೃತರಿಗೆ 69 ವರ್ಷ ವಯಸ್ಸಾಗಿತ್ತು.

Advertisement

ಮೂಲತ: ಹಳಿಯಾಳದವರಾದ ಐ.ಪಿ.ಘಟಕಾಂಬಳೆಯವರು ದಾಂಡೇಲಿಯ ನಿರ್ಮಲ ನಗರದ ನಿವಾಸಿಯಾಗಿದ್ದಾರೆ. ಎಸ್.ಬಿ.ಎಂ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅತ್ಯುತ್ತಮ ಸೇವೆಯನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದರು. ಜನಪರ ಕಾಳಜಿಯ ಜನಸ್ನೇಹಿ ವ್ಯಕ್ತಿತ್ವದ ಐ.ಪಿ.ಘಟಕಾಂಬಳೆಯವರು ಪತ್ನಿ, ಮೂವರು ಸುಪುತ್ರರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.‌

ಮೃತರ ನಿಧನಕ್ಕೆ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ

ಇದನ್ನೂ ಓದಿ: Earthquakes: ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಜನತೆಯನ್ನು ಬೆಚ್ಚಿ ಬೀಳಿಸಿದ ಎರಡು ಭೂಕಂಪ

Advertisement

Udayavani is now on Telegram. Click here to join our channel and stay updated with the latest news.

Next