Advertisement

ನಿರ್ಧಾರ ತನ್ನದು, ಶ್ರೇಯಸ್ಸು ಅನ್ಯರಿಗೆ: ಅಜಿಂಕ್ಯ ರಹಾನೆ

10:44 PM Feb 10, 2022 | Team Udayavani |

ಮುಂಬಯಿ: ಕಳೆದ ವರ್ಷದ ಆಸ್ಟ್ರೇಲಿಯ ಸರಣಿಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವನು ನಾನು, ಆದರೆ ಇದರ ಯಶಸ್ಸಿನ ಶ್ರೇಯಸ್ಸು ಬೇರೆಯವರ ಪಾಲಾಗಿದೆ ಎಂದು ಅಜಿಂಕ್ಯ ರಹಾನೆ ಕಟುವಾಗಿ ಹೇಳಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ರಹಾನೆ, “ಆಸ್ಟ್ರೇಲಿಯ ಸರಣಿಯಲ್ಲಿ ನಾನು ಮಾಡಿದ್ದೇನು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಅಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವನು ನಾನು. ಆದರೆ ಆ ಯಶಸ್ಸಿನ ಶ್ರೇಯಸ್ಸನ್ನು ಬೇರೆಯವರು ತೆಗೆದುಕೊಂಡರು’ ಎಂದು ಯಾರ ಹೆಸರನ್ನೂ ಉಲ್ಲೇಖೀಸಿದೆ ಹೇಳಿದರು. ಆದರೆ ಇದು ಅಂದಿನ ಕೋಚ್‌ ರವಿಶಾಸ್ತ್ರಿಗೆ ಎಸೆದ ಬೌನ್ಸರ್‌ ಎಂಬುದರಲ್ಲಿ ಅನುಮಾನವಿಲ್ಲ.

ಐತಿಹಾಸಿಕ ಸರಣಿ
ಅಂದು ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 36 ರನ್‌ಗೆ ಆಲೌಟ್‌ ಆಗಿ ಹೀನಾಯ ಸೋಲು ಕಂಡಿತ್ತು. ಬಳಿಕ ನಾಯಕ ವಿರಾಟ್‌ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹಿಂದೆ ಸರಿದಿದ್ದರು. ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರಹಾನೆ, ಉಳಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಾಲ್‌ ವಾರಿಯರ್ -ದಬಾಂಗ್‌ ದಿಲ್ಲಿ ಪಂದ್ಯ ಟೈ

ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ ನಿರಾಸೆ ಮೂಡಿಸಿದ್ದ ರಹಾನೆ, ಭಾರತ ಪರ ತಮ್ಮ ಕೊನೆಯ ಟೆಸ್ಟ್‌ ಆಡಿ ಮುಗಿಸಿದ್ದಾರೆ ಎಂಬ ಟೀಕೆಗೆ ಒಳಗಾಗಿದ್ದರು. ಈ ನಡುವೆ ಬಿಸಿಸಿಐ ರಹಾನೆ ಮತ್ತು ಪೂಜಾರ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡಿ ಲಯ ಕಂಡುಕೊಳ್ಳುವಂತೆ ಸೂಚಿಸಿದೆ.

Advertisement

“ನನ್ನ ಕ್ರಿಕೆಟ್‌ ಬದುಕು ಅಂತ್ಯಗೊಂಡಿದೆ ಎಂದು ಹೇಳುವವರನ್ನು ನೋಡಿ ನಗಬೇಕಷ್ಟೇ. ಕ್ರೀಡೆ ಬಗ್ಗೆ ತಿಳಿವಳಿಕೆಯುಳ್ಳವರು ಇಂಥ ಮಾತನ್ನು ಆಡುವುದಿಲ್ಲ. ಆಸ್ಟ್ರೇಲಿಯದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ನನ್ನ ಕೊಡುಗೆ ಏನು ಎಂಬುದನ್ನೂ ತಿಳಿದಿ¨ªಾರೆ. ಕ್ರೀಡೆ ಬಗ್ಗೆ ಒಲವು ಇರುವವರು ಸಮಯೋಚಿತವಾಗಿ ಮಾತನಾಡುತ್ತಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next