Advertisement

ಸಿದ್ದುಗಿಂತ ಚಾಮುಂಡೇಶ್ವರಿ ಕ್ಷೇತ್ರ ನನಗೆ ಚೆನ್ನಾಗಿ ಗೊತ್ತು

12:20 PM Mar 30, 2018 | Team Udayavani |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜನತೆಯ ನಾಡಿಮಿಡಿತ ಸಿದ್ದರಾಮಯ್ಯ ಅವರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕುತಂತ್ರದಿಂದ ಗೆದ್ದರು. ಅದು ಕಾಂಗ್ರೆಸ್‌ ಪಕ್ಷ ಎದುರಿಸಿದ ಉಪ ಚುನಾವಣೆ, ಸಿದ್ದರಾಮಯ್ಯ ಎದುರಿಸಿದ್ದಲ್ಲ ಎಂದರು.

1999ರ ಚುನಾವಣೆಯಲ್ಲಿ ಸೋತಾಗಲೇ ಎಚ್‌.ಡಿ.ದೇವೇಗೌಡರ ಬಳಿ ಬಂದು ನನಗಿನ್ನು ರಾಜಕಾರಣ ಬೇಡ, ವಕೀಲಗಿರಿ ಮಾಡಿಕೊಂಡು ಇರುತ್ತೇನೆ ಎಂದು ಅಳುತ್ತಿದ್ದಿರಿ, ಆ ಸಂದರ್ಭದಲ್ಲಿ ನಿಮಗೆ ಆತ್ಮಸ್ಥೈರ್ಯ ತುಂಬಿ ರಾಜಕಾರಣದಲ್ಲಿ ಮುಂದುವರಿಯುವಂತೆ ಮಾಡಿದ್ದು ದೇವೇಗೌಡರು, ಅದನ್ನೆಲ್ಲಾ ಮರೆತು ಬಿಟ್ಟಿರಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

ಚುನಾವಣಾ ಪೂರ್ವ ಸಮೀಕ್ಷೆ ವಿಚಾರದಲ್ಲಿ ಕೆಂಪಯ್ಯ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ತಿ.ನರಸೀಪುರದಲ್ಲಿ ಈ ಬಾರಿ ಗೆಲುವು ನಮ್ಮದೆ. ಮತ ಎಣಿಕೆ ದಿನ ಬೆಳಗ್ಗೆ 11ಗಂಟೆಗೇ ತಿ.ನರಸೀಪುರ ಕ್ಷೇತ್ರದ ಫ‌ಲಿತಾಂಶ ಮೊದಲಿಗೆ ಪ್ರಕಟವಾಗಲಿದೆ. ಜೆಡಿಎಸ್‌ನ ಮೊದಲ ಗೆಲುವು ಇಲ್ಲಿಂದಲೇ ಆರಂಭವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಬೇರೆ ಪಕ್ಷಗಳಲ್ಲಿ ಏನೇ ಬೆಳವಣಿಗೆಗಳಾದರೂ ಈಗ ಘೋಷಿಸಿರುವ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next