Advertisement

ಸೀಟು ಹಂಚಿಕೆಯಲ್ಲಿ  ನನ್ನ ಪಾತ್ರವಿಲ್ಲ : ನಳಿನ್‌ 

10:51 AM Apr 22, 2018 | |

ಮಂಗಳೂರು: ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಮಾಡಿದ್ದು, ನನ್ನ ಪಾತ್ರ ಇಲ್ಲ. ನಾನು ಯಾರ ಪರವಾಗಿಯೂ ಶಿಫಾರಸು ಮಾಡಿಲ್ಲ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. 

Advertisement

ಕೃಷ್ಣ ಪಾಲೆಮಾರ್‌ ಅವರು ತನಗೆ ಟಿಕೆಟ್‌ ದೊರೆಯದಿರಲು ನಳಿನ್‌ ಅವರೇ ಕಾರಣ ಎಂದು ಆರೋಪಿಸಿ ರುವ ಬಗ್ಗೆ ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕೃಷ್ಣ ಪಾಲೆಮಾರ್‌ ಹಿರಿಯ ನಾಯಕರು. ಶಾಸಕರಾಗಿ, ಸಚಿವರಾಗಿ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಟಿಕೆಟ್‌ ಸಿಗದಿರುವ ನೋವಿನಿಂದ ನನ್ನ ಹೆಸರು ಉಲ್ಲೇಖ ಮಾಡಿರಬಹುದು. ನಾನು ಯಾರ ಪರವಾಗಿ ಬ್ಯಾಟಿಂಗ್‌ ಮಾಡಿಲ್ಲ, ಯಾರಿಗೂ ಸೀಟು ಕೇಳಿಲ್ಲ ಎಂದರು. 

ಸತ್ಯಜಿತ್‌ ಸುರತ್ಕಲ್‌ ಕೂಡ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ಯಜಿತ್‌ ಟಿಕೆಟ್‌ ಸಿಗದಿರುವ ಹಿನ್ನೆಲೆಯಲ್ಲಿ ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿರುವ ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕಿದೆ ಎಂದರು.
ಪಾಲೆಮಾರ್‌ ಹಾಗೂ ಸತ್ಯಜಿತ್‌ ಸುರತ್ಕಲ್‌ ನೋವನ್ನು ಹಿರಿಯ ನಾಯಕರ ಗಮನಕ್ಕೆ ತರ ಲಾಗುವುದು. ಇಬ್ಬರೂ ಪಕ್ಷದಲ್ಲಿ ನನಗಿಂತ ಹೆಚ್ಚಿನ ಸ್ಥಾನ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ನೀಡುವ ಕುರಿತು ಹಿರಿಯರ ಜತೆ ನಾನು ಕೂಡ ಮಾತುಕತೆ ನಡೆಸುತ್ತೇನೆ ಎಂದರು. 
 

Advertisement

Udayavani is now on Telegram. Click here to join our channel and stay updated with the latest news.

Next