Advertisement

ಕೆಎಂಎಫ್ ನಲ್ಲಿ ಗೋಲ್‌ಮಾಲ್‌ ಮಾಡಿದ ದಾಖಲೆ ನನ್ನ ಬಳಿಯಿದೆ

01:23 AM May 28, 2019 | Sriram |

ತುಮಕೂರು: ಸಚಿವ ಎಚ್.ಡಿ. ರೇವಣ್ಣ ಕೆಎಂಎಫ್ ನಲ್ಲಿ ಸಾವಿರಾರು ಕೋಟಿ ರೂ. ಗೋಲ್ ಮಾಲ್ ಮಾಡಿದ ದಾಖಲೆ ನನ್ನ ಬಳಿಯಿದೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

Advertisement

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅವರು ಏನು ಮಾಡುತ್ತಾರೋ ಮಾಡಲಿ. ನಿಂಬೆಹಣ್ಣು ತೋರಿಸಿಕೊಂಡು ಎಲ್ಲಾ ಕಡೆ ಬಂದರೆ ಏನೂ ಆಗುವುದಿಲ್ಲ. ಈಗ ಮಾಡುತ್ತಿರುವ ಈ ಮೂಗರ್ಜಿ ಮೂರು ವರ್ಷದ ಹಿಂದಿನದ್ದು. ಅದಕ್ಕೆ ಇವರೀಗ ತನಿಖೆ ಮಾಡುತ್ತಾರಂತೆ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ನರೇದ್ರ ಮೋದಿ ಪ್ರಮಾಣ ವಚನ ನಂತರ ರಾಜ್ಯದ ಮೈತ್ರಿ ಸರಕಾರ ಪತನ ವಾಗಲಿದೆ ಎಂದು ಭವಿಷ್ಯ ನುಡಿದ ರಾಜಣ್ಣ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪತನಕ್ಕೆ ಝೀರೋ ಟ್ರಾಫಿಕ್‌ ಕಾರಣ ಎಂದರು. ನನ್ನ ಬೆಂಬಲವಿಲ್ಲದಿದ್ದರೆ ಪರಮೇಶ್ವರ್‌ ಗೆಲ್ಲುತ್ತಿರಲಿಲ್ಲ, ನನ್ನ ವಿರುದ್ಧ ಯಾರಾದರೂ ಧಿಕ್ಕಾರ ಕೂಗಿದರೆ ಅವರ ನಾಲಿಗೆ ಸೀಳುತ್ತೇನೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಮೈತ್ರಿ ಸರಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿರುದ್ಧ ಹರಿಹಾಯ್ದ ಅವರು, ತುಮಕೂರು ಕಾಂಗ್ರೆಸ್‌ ಪಕ್ಷದ ಭದ್ರ ಕೋಟೆ. ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ. ಆದರೂ ಇಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ‌್ಯರ್ಥಿ ಜಿ.ಎಸ್‌.ಬಸವರಾಜುಗೆ ಅಭಿನಂದನೆ ಸಲ್ಲಿಸುತ್ತೇನೆ. ಬಸವರಾಜು 20 ವರ್ಷ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಬಿಜೆಪಿಗಿಂತ ಕಾಂಗ್ರೆಸ್‌ ನಾಯಕರ ಸಂಪರ್ಕ ಹೆಚ್ಚಿದೆ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆಲುವು ಸಾಧಿಸಿದ್ದಾರೆ ಎಂದು ನುಡಿದರು.

ನನ್ನ ಅಧ್ಯಕ್ಷ ಸ್ಥಾನ ಐದು ವರ್ಷ ಪೂರ್ಣ: ರೇವಣ್ಣ ಬರಲಿ, ಅವರ ತಾತ ಬರಲಿ ಯಾವುದೇ ನಿಂಬೆಹಣ್ಣ ಹಿಡಿದು ಕೊಂಡು ಬರಲಿ, ನಾನು ಅಫೆಕ್ಸ್‌ ಬ್ಯಾಂಕ್‌ ಅಧ್ಯಕ್ಷನಾಗಿ ಐದು ವರ್ಷದ ಅಧಿಕಾರ ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next