Advertisement

ಬಹುಮತದ ಬಗ್ಗೆ ನಾನೇನೂ ಮಾತನಾಡಲಾರೆ’

12:24 AM Jul 27, 2019 | Sriram |

ಬೆಂಗಳೂರು: “ಬಿಜೆಪಿ ಬಹುಮತದ ಬಗ್ಗೆ ನಾನು ಏನೂ ಮಾತನಾಡಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

Advertisement

ಜೆ.ಪಿ.ಭವನದಲ್ಲಿ ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಕುರಿತು ಪ್ರತಿಕ್ರಿಯಿಸಿ, “ನಾನು ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ.

ಯಡಿಯೂರಪ್ಪ ಪ್ರಮಾಣ ಸ್ವೀಕರಿಸಿದ್ದಾರೆ ಎಂಬುದು ಗೊತ್ತಾಗಿದೆ. ಬಹುಶ: ಸೋಮವಾರ ಅಥವಾ ಮಂಗಳವಾರ ಬಹುಮತ ಸಾಬೀತುಪಡಿಸಬಹುದು. ಸದ್ಯಕ್ಕೆ ಯಾವ ವಿಚಾರವೂ ನನಗೆ ಗೊತ್ತಿಲ್ಲ’ ಎಂದರು. ಇದೇ ತಿಂಗಳ 31ರೊಳಗೆ ಹಣಕಾಸು ಮಸೂದೆಯನ್ನು ಮಂಡನೆ ಮಾಡಬೇಕು.ಸದ್ಯ ಈಗ ಇರುವ ಸ್ಪೀಕರ್‌ ಅವರೇ ಮುಂದುವರಿಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next