Advertisement

ನಾನು ಮನಸ್ಸು ಮಾಡಿದರೆ ಎಂಎಲ್‌ಎ, ಎಂಪಿ ಆಗುತ್ತೇನೆ: ರಾಕ್‌ಲೈನ್‌ ವೆಂಕಟೇಶ್

12:43 PM Jul 10, 2021 | Team Udayavani |

ಬೆಂಗಳೂರು: ಕುಮಾರಸ್ವಾಮಿ ಮನಸ್ಸು ಮಾಡಿದರೆ 100 ಸಿನಿಮಾ ಮಾಡುತ್ತಾರೆ.  ನಾನು ಮನಸ್ಸು ಮಾಡಿದ್ರೆ ಎಂಎಲ್‌ಎ, ಎಂಪಿ ಆಗುತ್ತೇನೆ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಹೇಳಿದರು.

Advertisement

ಕುಮಾರಸ್ವಾಮಿ- ಸುಮಲತಾ ಮಾತಿನ ಸಮರದಲ್ಲಿರುವ ಸುದ್ದಿಯಲ್ಲಿರುವ ರಾಕ್ ಲೈನ್ ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಡ್ಯ ರಾಜಕೀಯಕ್ಕೆ ನಾನ್ಯಾಕೆ ಹೋಗಲಿ. ನಾನು ಈಗಲೂ ಬಂದಿಲ್ಲ, ಮುಂದೇನು ಬರಲ್ಲ. ರಾಜ್ಯ ರಾಜಕಾರಣಕ್ಕೆ ನಾನು ಬರುವುದೇ ಇಲ್ಲ. ಮಂಡ್ಯ ರಾಜಕೀಯಕ್ಕೆ ನಾನು ಬರುತ್ತೇನೆ ಎಂಬ ಭಯವೇಕೆ ನಿಮಗೆ ಎಂದು ಜೆಡಿಎಸ್‌ ನಾಯಕರ ಹೇಳಿಕೆಗೆ ರಾಕ್‌ಲೈನ್‌ ತಿರುಗೇಟು ನೀಡಿದರು.

ಇದನ್ನೂ ಓದಿ:ಸತ್ಯದ ಪರವಾಗಿ ನಿಂತಾಗ, ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ: ಸುಮಲತಾ

ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ.ಸುಮಲತಾ ವಿರುದ್ಧ ಮಾತನಾಡಿದರೂ ಸುಮ್ಮನಿದ್ದೆ. ಆದರೆ ಒಂದು ಹೆಣ್ಣು ಎಂದೂ ನೋಡದೆ ಮಾತನಾಡ್ತಿದ್ದಾರೆ, ಸುಮಲತಾ ಎಷ್ಟೋ ಸಾರಿ ನೊಂದು ಕಣ್ಣೀರು ಹಾಕಿದ್ದಾರೆ. ಇಷ್ಟೆಲ್ಲಾ ಆದ್ರೂ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಅಂಬಿ ಸ್ಮಾರಕ ಬಗ್ಗೆ ಮಾತನಾಡಿದ್ದಕ್ಕೆ ಉತ್ತರ ಕೊಟ್ಟೆ ಎಂದರು.

Advertisement

ದೇವೆಗೌಡರ ಕುಟುಂಬ ಕೂಡ ನನಗೆ ಆತ್ಮೀಯರು, ನಾನ್ಯಾಕೆ ಅವರ ಕುಟುಂಬವನ್ನು ಒಡೆಯಲಿ. ನಾನು ಬೇಕಾದರೆ ಕ್ಷಮೆ ಕೇಳ್ತಿನಿ, ಆದರೆ ಯಾವ ವಿಚಾರಕ್ಕೆಂದು ಹೇಳಲಿ. ನಾನು ಕುಮಾರಸ್ವಾಮಿ ವಿರುದ್ಧ ಮಾತಾಡಿಲ್ಲ, ಕ್ಷಮೆ ಕೇಳುವಂತಹ ವಿಚಾರ ನಾನು ಮಾತಾಡಿಲ್ಲ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next