Advertisement

ನನ್ನ ಆಟದ ಬಗ್ಗೆ ನಂಬಿಕೆ ಮೂಡಿದೆ: ಶ್ರೇಯಸ್‌ ಅಯ್ಯರ್‌ 

10:25 AM Dec 22, 2019 | Sriram |

ಕಟಕ್‌: ನನ್ನ ಆಟದ ಬಗ್ಗೆ ತನಗೀಗ ಅರಿವಾಗಿದೆ, ಜವಾಬ್ದಾರಿಯೂ ಹೆಚ್ಚಿದೆ ಎಂದು ಭಾರತ ತಂಡದ ಯುವ ಆಟಗಾರ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

Advertisement

“ಪ್ರಥಮ ದರ್ಜೆ ಕ್ರಿಕೆಟ್‌ ಆಡುವ ವೇಳೆ ನಾನು ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದೆ ಮತ್ತು ಅಷ್ಟೇನೂ ಜವಾಬ್ದಾರಿಯಿಂದ ಆಡುತ್ತಿರಲ್ಲಿ. ಆಗ ಯಾರ ಸಲಹೆಯನ್ನೂ ಕೇಳುತ್ತಿರಲಿಲ್ಲ. ತಂಡವನ್ನು ಗೆಲ್ಲಿಸಬಲ್ಲೆ ಎನ್ನುವ ವಿಶ್ವಾಸ ಕೂಡ ಇರುತ್ತಿರಲ್ಲಿ. ಇದಕ್ಕೆ ಪ್ರಬುದ್ಧತೆಯ ಕೊರತೆಯೂ ಕಾರಣವಾಗಿರಬಹುದು’ ಎಂದು ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

“ಆದರೆ ಇಂದು ನಾನು ಹೆಚ್ಚು ಜವಾಬ್ದಾರಿಯಿಂದ ಆಡುತ್ತಿದ್ದೇನೆ ಎನ್ನುವ ನಂಬಿಕೆ ಮೂಡಿದೆ. ಒಂದು ತಂಡವನ್ನು ಮುನ್ನಡೆಸುವ ಸಾಮರ್ಥ್ಯವೂ ನನ್ನಲ್ಲಿದೆ ಎಂಬಷ್ಟರ ಮಟ್ಟಿಗೆ ನಾನಿಂದು ಕ್ರಿಕೆಟ್‌ ಕಲಿತಿದ್ದೇನೆ’ ಎಂದು ಕಟಕ್‌ ಪಂದ್ಯಕ್ಕೂ ಮುನ್ನ ಅಯ್ಯರ್‌ ಹೇಳಿದರು.

ಶ್ರೇಯಸ್‌ ಅಯ್ಯರ್‌ ಈಗಾಗಲೇ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಎರಡೂ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. 4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next