Advertisement

ಮೈತ್ರಿ ಸರ್ಕಾರದ ಟ್ರಬಲ್‌ ಶೂಟರ್‌ ನಾನೇ; ಸಿದ್ದರಾಮಯ್ಯ ಹೇಳಿದ್ದೇನು?

11:48 AM Sep 30, 2018 | Team Udayavani |

ಮೈಸೂರು: ಮೈತ್ರಿ ಸರ್ಕಾರದ ಟ್ರಬಲ್‌ ಶೂಟರ್‌ ನಾನೇ, ಅದಕ್ಕಾಗಿ ನನ್ನನ್ನು ಸಮನ್ವಯ ಸಮಿತಿಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದ್ದು , 5 ವರ್ಷ ಪೂರೈಸುತ್ತದೆ. ಸಾಲ ಮನ್ನಾ ಮೊದಲಾದ ಕೊಡುಗೆಗಳ ಕುರಿತು ಜನರಿಗೆ ಸರ್ಕಾರದ ಕುರಿತು ಒಳ್ಳೆಯ ಭಾವನೆ ಇದೆ ಎಂದರು. 

ನಮ್ಮ ಯಾವೋಬ್ಬ ಶಾಸಕರು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿಲ್ಲ ಎಂದರು. 

ಸಮನ್ವಯ ಸಮಿತಿಯ ಸಭೆಯನ್ನು ಅಗತ್ಯ ಬಿದ್ದಾಗ ಮಾತ್ರ ಕರೆಯುತ್ತೇವೆ, ಸುಮ್ಮನೆ ಕರೆಯುವುದಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next