Advertisement

Lok Sabha Election ವಿಜಯಪುರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ: ಸಂಸದ ರಮೇಶ್ ಜಿಗಜಿಣಗಿ

11:18 AM Aug 25, 2023 | keerthan |

ವಿಜಯಪುರ: ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಆಡಳಿತದ ವಿರುದ್ಧ ಜನರು ಅದಾಗಲೇ ರೋಸಿ ಹೋಗಿದ್ದಾರೆ.‌ ಇಂಥ ಸ್ಥಿತಿಯಲ್ಲಿ ಅವರು ಎಲ್ಲಿಂದ 20 ಸ್ಥಾನ ಗೆಲ್ಲಲು ಸಾಧ್ಯ. ಬಿಜೆಪಿ ಮತ್ತೆ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಬರುವ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಲಿದೆ. ನಾನೇನು ಚುನಾವಣೆಗಾಗಿ ವಿಶೇಷ ಸಿದ್ಧತೆ, ತಂತ್ರ ಮಾಡುವುದಿಲ್ಲ. ಚುನಾವಣೆ ಬಂದಾಗ ಅಪ್ಪ, ಅಣ್ಣ ಅನಕೋತ ಹೋಗ್ತೀನಿ ಎಂದು ವಿವರಿಸಿದರು.

ವಿಪಕ್ಷದ ನಾಯಕನ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ಸೂಕ್ತ‌ ನಿರ್ಧಾರ ಕೈಗೊಳ್ಳಲಿದೆ ಎಂದ ಸಂಸದ ಜಿಗಜಿಣಗಿ, ನಾನು ಪ್ರಯತ್ನ ಮಾಡದಿದ್ದರೆ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣವೇ ಅಸಾಧ್ಯವಾಗುತ್ತಿತ್ತು. ಹೀಗಾಗಿ ವಿಮಾನ ನಿಲ್ದಾಣ ನಿರ್ಮಿಸಿದ ಶ್ರೇಯಸ್ಸು ನನಗೇ ಸಲ್ಲಬೇಕು ಎಂದರು.

ನಗರಕ್ಕೆ ಹೊಂದೊಕೊಂಡಿರುವ ಹಿಟ್ನಳ್ಳಿ ರಸ್ತೆಯಲ್ಲಿನ ವಿಜಯಪುರ ಟೋಲ್ ನಾಕಾ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಎರಡು ಪತ್ರ ಬರೆದಿದ್ದರೂ ಸ್ಪಂದನೆ ಸಿಕ್ಕಿಲ್ಲ. ಟೋಲ್ ನಾಕಾ ನಿರ್ವಹಿಸುವವರನ್ನು ಕೇಳಿದರೆ ಸ್ಥಳೀಯರಿಗೆ ಸಮಸ್ಯೆ ಮಾಡದೆ ಉಚಿತವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಗಿ ಹೇಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next