Advertisement

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

12:58 AM May 21, 2024 | Team Udayavani |

ಕೋಲ್ಕತಾ: “ನಾನು ಆರ್‌ಎಸ್‌ಎಸ್‌ ಸದಸ್ಯನಾಗಿದ್ದೆ. ಈಗ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾಗಿ ರು ವುದರಿಂದ ಮತ್ತೆ ಸಂಘದ ಚಟುವಟಿಕೆಗಳತ್ತ ಮರಳುತ್ತೇನೆ’ ಎಂದು ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ನ್ಯಾ| ಚಿತ್ತ ರಂಜನ್‌ ದಾಸ್‌ ಹೇಳಿದ್ದಾರೆ.

Advertisement

ಸೇವೆಯಿಂದ ನಿವೃತ್ತ ರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, “ನಾನು ಸಂಘದ ಸದಸ್ಯನಾಗಿದ್ದು, ಅಗತ್ಯ ವಿದ್ದಲ್ಲಿ ಅವರು ನನ್ನನ್ನು ಕರೆದಲ್ಲಿ ಮತ್ತೆ ಸಂಘಕ್ಕೆ ಮರಳಲು ಸಿದ್ಧನಿದ್ದೇನೆ’ ಎಂದು ತಿಳಿಸಿದರು. ಕೆಲವು ವ್ಯಕ್ತಿಗಳಿಗೆ ಇದು ಹಿಡಿಸದೇ ಇದ್ದರೂ ನಾನು ಸಂಘದ ಸದಸ್ಯನಾಗಿದ್ದೆ, ಮುಂದೆಯೂ ಆಗಿರುವೆ ಎಂಬು ದನ್ನು ಒಪ್ಪಬೇಕು ಸಂಘಕ್ಕೆ ನಾನು ಋಣಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next