Advertisement

ಬೆಳಗಾವಿ ಕೈ ಕಲಹ :ಮಧ್ಯಪ್ರವೇಶಿಸುವ ಅವಶ್ಯಕತೆ ನನಗಿಲ್ಲ:ಸಚಿವ ಡಿಕೆಶಿ

04:12 PM Sep 05, 2018 | Team Udayavani |

ಹೊಸದಿಲ್ಲಿ: ಬೆಳಗಾವಿ ನಾಯಕರ ಭಿನ್ನಾಭಿಪ್ರಾಯದ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ನನಗಿಲ್ಲ. ನನ್ನ ಮಿತಿ  ಏನು ಅನ್ನುವುದು ನನಗೆ ಗೊತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದಾರೆ. 

Advertisement

ಕಾಂಗ್ರೆಸ್‌ ನಾಯಕರಾದ ಲಕ್ಷ್ಮಿ ಹೆಬ್ಬಾಳ್‌ಕರ್‌ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಲಹದ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಬುಧವಾರ ಉತ್ತರಿಸಿದ ಅವರು ನನಗೆ ನನ್ನದೇ ಕೆಲಸ ಇದೆ. ಬೇರೆಯವರ ಕ್ಷೇತ್ರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು. 

ನಮ್ಮ ಪಕ್ಷದ ನಾಯಕರು ಹೇಳಿದರೆ ಆ ಕೆಲಸ ಮಾಡುತ್ತೇನೆ. ನನಗೆ ಮಿತಿ ಇದೆ, ಅನುಭವವೂ ಇದೆ. ಚಾರಕಿಹೊಳಿ ಸಹೋದರರು ನಮ್ಮ ಪ್ರಮುಖ ನಾಯಕರು. ಎಲ್ಲರೂ ಅವರವರ ಕ್ಷೇತ್ರಗಳಲ್ಲಿ  ಸ್ವತಂತ್ರವಾಗಿ ಕೆಲಸ ಮಾಡಬಹುದು, ಯಾರೂ ಕೈಯಾಡಿಸುವುದಿಲ್ಲ. ನನಗದರ ಅವಶ್ಯಕತೆಯೂ ಇಲ್ಲ ಎಂದರು. 

ಭವಿಷ್ಯ ನುಡಿಯುವುದಿಲ್ಲ 
ನಾನು ಭವಿಷ್ಯ ನಂಬುತ್ತೇನೆ ಆದರೆ ಭವಿಷ್ಯ ನುಡಿಯುವುದಿಲ್ಲ. ದಿನ ಬೆಳಗಾದರೆ ಟಿವಿಯಲ್ಲಿ 150 ಜ್ಯೋತಿಷಿಷಳು ಬರುತ್ತಾರೆ. ಅವರಂತೆಯೇ ಯಡಿಯೂರಪ್ಪ , ಶೆಟ್ಟರ್‌ ಅವರೂ ಭವಿಷ್ಯ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. 
 

Advertisement

Udayavani is now on Telegram. Click here to join our channel and stay updated with the latest news.

Next