Advertisement

ನಾನು ಕನಸೇ ಕಾಣುವುದಿಲ್ಲ,ಇನ್ನು ಹಗಲು ಗನಸೆಲ್ಲಿಂದ; ಬಿಎಸ್‌ವೈ

09:20 AM May 06, 2019 | Vishnu Das |

ಹುಬ್ಬಳ್ಳಿ: ನಾನು ಕನಸೇ ಕಂಡಿಲ್ಲ ಇನ್ನು ಹಗಲು ಗನಸು ಎಲ್ಲಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಗ್ಗೆ ಮಾತನಾಡುವುದರಿಂದ ನಾನು ದೊಡ್ಡವನಾಗುತ್ತೇನೆ ಅನ್ನುವ ಭ್ರಮೆಯಲ್ಲಿಸಿದ್ದರಾಮ್ಯಯ ಮತ್ತು ಕೆಲ ಕಾಂಗ್ರೆಸ್‌ ನಾಯಕರು ಇದ್ದಾರೆ.

ಎಲ್ಲರೂ ಹಗುರವಾದ ಮತುಗಳನ್ನು ಆಡುತ್ತಿದ್ದಾರೆ. ಮೇ 23 ರಂದು ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.

ನಾನು ಕನಸೇ ಕಂಡಿಲ್ಲ,ಇನ್ನು ಹಗಲುಗನಸು ಎಲ್ಲಿಂದ. ಮೇ 23 ರ ಬಳಿಕ ಅಧಿಕಾರಕ್ಕೆ ಬರುತ್ತೇವೆ ಅನ್ನುವ ಮಾತು ಹೇಳಬೇಡಿ ಎಂದು ನಮ್ಮ ಪಕ್ಷದ ಎಲ್ಲಾ ಮುಖಂಡರಿಗೆ ನಾನು ಕೈಮುಗಿದು ಮನವಿ ಮಾಡುತ್ತೇನೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next