Advertisement

ಹೈದರಾಬಾದ್‌: ಮಕ್ಕಳ ಕಳ್ಳಸಾಗಣೆಗಾರರಿಬ್ಬರಿಗೆ 14 ವರ್ಷ ಕಠಿನ ಶಿಕ್ಷೆ

04:23 PM Jun 22, 2018 | udayavani editorial |

ಹೈದರಾಬಾದ್‌ : ಆರೋಗ್ಯಕ್ಕೆ ಅತ್ಯಂತ ಮಾರಕವಾಗಿರುವ ಬಳೆ ತಯಾರಿಸುವ ಘಟಕದಲ್ಲಿ ಜೀತದಾಳುಗಳಾಗಿ ದುಡಿಸುವ ಸಲುವಾಗಿ ತಮ್ಮ ರಾಜ್ಯವಾದ ಬಿಹಾರದಿಂದ ಬಾಲಕರನ್ನು ಅಪಹರಿಸಿ ತರುತ್ತಿದ್ದ ಇಬ್ಬರು ಬಳೆ ಉದ್ಯಮಿಗಳಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ14 ವರ್ಷ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ. 

Advertisement

ಶಿಕ್ಷೆಗೆ ಗುರಿಯಾಗಿರುವ ವ್ಯಾಪಾರಿಗಳೆಂದರೆ ಮೊಹಮ್ಮದ್‌ ಇಮ್‌ತಿಯಾಜ್‌ (40) ಮತ್ತು ಮುನ್ನಾ (28). ಇವರು ಬಿಹಾರದ ನಲಂದಾ ಮತ್ತು ಗಯಾ ಜಿಲ್ಲೆಯವರು.

ಹಳೇ ನಗರ ಪ್ರದೇಶದಲ್ಲಿ ತಾಲಾಬ್‌ ಕಟ್ಟಾ ಎಂಬಲ್ಲಿನ ಈ ವ್ಯಾಪಾರಿಗಳ ಬಳೆ ತಯಾರಿ ಘಟಕದಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಬಿಹಾರದ 210 ಮಂದಿ ಮಕ್ಕಳನ್ನು 2016ರ ಜನವರಿ 9ರಂದು ಕೈಗೊಳ್ಳಲಾಗಿದ್ದ ಶೋಧ ಕಾರ್ಯಾಚರಣೆಯಲ್ಲಿ ಪಾರುಗೊಳಿಸಲಾಗಿತ್ತು. ಬಳಿಕ ಅವರನ್ನು ಅವರ ಹೆತ್ತವರ ವಶಕ್ಕೆ ಒಪ್ಪಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next