Advertisement

ಪಕ್ಕದ ಬಿಲ್ಡಿಂಗ್‌ ಗೆ ವ್ಯಾಪಿಸಿದ ಬೆಂಕಿಯ ಹೊಗೆ: ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತ್ಯು

10:22 AM Apr 16, 2023 | Team Udayavani |

ಹೈದರಾಬಾದ್: ಮರದ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಭಾನುವಾರ (ಏ.16 ರಂದು) ಮುಂಜಾನೆ ಹೈದರಾಬಾದ್ ನ ಕುಶೈಗುಡದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಮೃತರನ್ನು ವಾರಂಗಲ್ ಮೂಲದವರರಾದ ಸುರೇಶ್, ಸುಮಾ ಮತ್ತು ಬಾಬು ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಟಿಂಬರ್ ಡಿಪೋದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೊಗೆ ಪಕ್ಕದಲ್ಲೇ ಇರುವ ಬಿಲ್ಡಿಂಗ್‌ ಗೂ ವ್ಯಾಪಿಸಿದೆ. ಬಿಲ್ಡಿಂಗ್‌ ನ ಎರಡನೇ ಮಹಡಿಯಲ್ಲಿ ಕುಟುಂಬವೊಂದು ವಾಸಿಸುತ್ತಿದ್ದು ದಟ್ಟ ಹೊಗೆಯ ಕಾರಣ ಮೂವರಿಗೆ ಉಸಿರುಗಟ್ಟಲು ಶುರುವಾಗಿದೆ. ಈ ವೇಳೆ ಹೊಗೆಯ ನಡುವೆಯೇ ಮನೆಯಿಂದ ಹೊರಬರಲು ಯತ್ನಿಸಿದ ಮೂವರು ಒಂದನೇ ಮಹಡಿಗೆ ಬರುವ ವೇಳೆಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಬೆಂಕಿ ನಂದಿಸಿದ ಬಳಿಕ ಕುಟುಂಬ ಇರುವ ಬಗ್ಗೆ ತಿಳಿದ ಅಗ್ನಿಶಾಮಕ ಮತ್ತು ಡಿಆರ್‌ಎಫ್ ಸಿಬ್ಬಂದಿ ಕಟ್ಟಡದೊಳಗೆ ಧಾವಿಸಿದ್ದಾರೆ. ಈ ವೇಳೆ ಮೂವರು ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕುಶೈಗುಡ ಎಸಿಪಿ ವೈ ವೆಂಕಟ್ ರೆಡ್ಡಿ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next