Advertisement

ಮಗಳ ಮದುವೆಗೆ ಬಂದು ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಹೈದರಾಬಾದ್ ಪಾಲಿಕೆ ಸಿಬ್ಬಂದಿ

02:25 PM Apr 19, 2020 | keerthan |

ಗಂಗಾವತಿ: ಮಗಳ ಮದುವೆಗೆ ಆಗಮಿಸಿ ಕೋವಿಡ್-19 ಕರ್ಪ್ಯೂ ಹಿನ್ನೆಲೆಯಲ್ಲಿ ಮರಳಿ ಹೈದರಾಬಾದ್ ಗೆ ತೆರಳದೆ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಮಹಿಳಾ ನೌಕರರೊಬ್ಬರು ಇರುವ ಪ್ರಸಂಗ ತಾಲ್ಲೂಕಿನ ಸಾಣಾಪೂರ ಗ್ರಾಮದಲ್ಲಿ ಜರುಗಿದೆ.

Advertisement

ಹೈದರಾಬಾದ್ ಗ್ರೇಟರ್ ಮುನಿಸಿಪಲ್ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡುವ ಹೈದರಾಬಾದ್ ನಗರದ ಮೌಲಾಲಿ ಗುಂಬಜ್ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಶಾಂತಮ್ಮ ಅವರ ಪತಿ ಲಕ್ಷ್ಮಣ ಮತ್ತು ಮಗ ಅರುಣಾ ಮಗಳ ಮದುವೆ ಮಾಡಲು ಮಾರ್ಚ್‌ 13ರಿಂದ ಸಾಣಾಪೂರ ಗ್ರಾಮಕ್ಕೆ ಆಗಮಿಸಿ ಹೋಗಲು ಸಿದ್ದರಾದ ಸಂದರ್ಭದಲ್ಲಿ ಕರ್ಪ್ಯೂ ಜಾರಿಯಾಗಿದ್ದರಿಂದ ಹೋಗಲು ಆಗುತ್ತಿಲ್ಲ.

ಆದರೆ ಜಿಎಚ್ಎಂಸಿ ಅಧಿಕಾರಿಗಳು ಮೇಲಿಂದ ಮೇಲೆ ಮೊಬೈಲ್ ಮೂಲಕ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡುತ್ತಿದ್ದು ಹೈದರಾಬಾದ್ ಗೆ ತೆರಳಲು ಜಿಲ್ಲಾಧಿಕಾರಿಗಳು ಅವಕಾಶ ನೀಡುವಂತೆ ಶಾಂತಮ್ಮ ಕುಟುಂಬದವರು ಉದಯವಾಣಿ ಜತೆ ಮಾತನಾಡಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next