Advertisement

Tragic: ಪತ್ನಿ ಸಾವಿನ ಸುದ್ದಿ ಕೇಳಿದ ಪತಿಯೂ ಹೃದಯಘಾತದಿಂದ ನಿಧನ

09:48 PM Aug 24, 2024 | Team Udayavani |

ಕೊಳ್ಳೇಗಾಲ(ಚಾಮರಾಜನಗರ): ಪತ್ನಿಯ ಸಾವಿನ ಸುದ್ದಿಯನ್ನು ಕೇಳಿ ಪತಿಯೂ ಹಠಾತ್‌ ಹೃದಯಘಾತಕ್ಕೆ ಒಳಗಾಗಿ ನಿಧನರಾದ ಹೃದಯವಿದ್ರಾವಕ ಘಟನೆ ಹನೂರು ತಾಲ್ಲೂಕಿನ ಮಂಗಲ ಗ್ರಾಮ ಸಮೀಪದ ರಾಮನಗುಡ್ಡ ಜಲಾಶಯ ತೋಟದ ಮನೆಯಲ್ಲಿ ಶುಕ್ರವಾರ (ಆ.23ರಂದು) ರಾತ್ರಿ ನಡೆದಿದೆ.

Advertisement

ರಾಜಶೇಖರವೀರಣ್ಣರಾಧ್ಯ (68), ಈತನ ಪತ್ನಿ ಸುಮಿತ್ರ (60)ಮೃತ ದುರ್ಧೈವಿಗಳಾಗಿದ್ದಾರೆ.

ಘಟನೆ ವಿವರ: ಶುಕ್ರವಾರ ರಾತ್ರಿ 10.30 ರ ವೇಳೆಗೆ ಸುಮಿತ್ರ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪತ್ನಿ ಸುಮಿತ್ರ ಮೃತಪಟ್ಟಿದ್ದಾರೆ. ಇದನ್ನು ಕೇಳಿ ಪತಿ ರಾಜಶೇಖರವೀರಣ್ಣರಾಧ್ಯ  ಅವರಿಗೂ ಹೃದಯಘಾತವಾಗಿದ್ದು, ಅವರೂ ಮೃತಪಟ್ಟಿದ್ದಾರೆ. ಆ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದೆ.

ಮೃತರು ಎರಡು ಹೆಣ್ಣು, ಒಂದು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಮಂಗಲ ಗ್ರಾಮ ಸಮೀಪದ ರಾಮನಗುಡ್ಡ ಜಲಾಶಯ ತೋಟದ ಮನೆಯಲ್ಲಿ ಶನಿವಾರ(ಆ.24ರಂದು) ಸಂಜೆ ನೆರವೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next