Advertisement

ಅಪಘಾತ ಮಾಡಿದ್ದಕ್ಕೆ ಹೆಂಡತಿ ವಿರುದ್ಧವೇ ದೂರು ನೀಡಿದ ಪತಿರಾಯ!

09:45 AM Nov 28, 2019 | Team Udayavani |

ಶಿವಮೊಗ್ಗ: ಪತ್ನಿಯ ನಿರ್ಲಕ್ಷ್ಯ ಮತ್ತು ದುಡುಕುತನದಿಂದಾಗಿ ಅಪಘಾತ ಸಂಭವಿಸಿದೆ. ಹಾಗಾಗಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತಿಯೇ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ಹೀಗೆ ಅಪಘಾತ ಮಾಡಿದ ಪತ್ನಿಯ ಬಗ್ಗೆ ದೂರು ನೀಡಿದವರು ಹೆಬ್ರಿಯ ನಾಗರಾಜ್.

ಉಡುಪಿ ಜಿಲ್ಲೆಯ ಹೆಬ್ರಿಯ ನಾಗರಾಜ್ ತಮ್ಮ ಪತ್ನಿ ಮಂಜುಳಾ, ಮಗ ಈಶಾನ್, ಪತ್ನಿಯ ಅಕ್ಕನ ಮಗಳು ಸುಪ್ರಭ ಅವರೊಂದಿಗೆ ಸಾಗರದ ಸಂಬಂಧಿಯೊಬ್ಬರ ಮನೆಗೆ ತೆರಳುತ್ತಿದ್ದರು. ಪತ್ನಿ ಮಂಜುಳಾ ಅವರೆ ಕಾರು ಚಲಾಯಿಸುತ್ತಿದ್ದರು ಎಂದು ನಾಗರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ಹೊಸನಗರದ ರಾಮಚಂದ್ರಾಪುರ ಗ್ರಾಮದ ಬಳಿ ಕಾರು ಸೇತುವೆಯಿಂದ ಕೆಳಗೆ ಬಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿತ್ತು. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾರು ಸೇತುವೆ ಮೇಲಿನಿಂದ ಕೆಳಗೆ ಪಲ್ಟಿಯಾಗಿ ಬಿದ್ದಿದ್ದರಿಂದ ಕಾರಿನ ಮುಂಭಾಗ, ಹಿಂಬದಿ ಸಂಪೂರ್ಣ ಜಖಂ ಆಗಿದೆ. ಪಲ್ಟಿ ಆಗಿ ಬಿದ್ದಿದ್ದರಿಂದ ಕಾರಿನ ಮೇಲ್ಬಾಗಕ್ಕೂ ಹಾನಿಯಾಗಿದೆ.

ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next