Advertisement

2 ಸಾವಿರ ರೂ.ಕಾಣದ್ದಕ್ಕೆ ಗರ್ಭಿಣಿಯನ್ನೇ ಸುಟ್ಟ ಪತಿ!

07:15 AM Sep 11, 2017 | Team Udayavani |

ಕಲಬುರಗಿ: ಮನೆಯಲ್ಲಿಟ್ಟಿದ್ದ 2 ಸಾವಿರ ರೂ. ಕಾಣದಿದ್ದಾಗ ಆ ಹಣವನ್ನು ಸೊಸೆಯೇ ಕದ್ದಿದ್ದಾಳೆಂದು ಸಂಶಯ ಪಟ್ಟ ಅತ್ತೆ ಹಾಗೂ ಪತಿ ಸೇರಿ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಕೊಲೆ ಮಾಡಿದ ಘಟನೆ ತಾಲೂಕಿನ ದೇವಲಾನಾಯಕ ತಾಂಡಾದಲ್ಲಿ ಇತ್ತೀಚೆಗೆ ನಡೆದಿದೆ. 

Advertisement

ಪೂಜಾ ಕೊಲೆಯಾದ ನತದೃಷ್ಟೆ. ಈಕೆಯನ್ನು 8 ತಿಂಗಳ ಹಿಂದೆ ದೇವಲಾನಾಯಕ ತಾಂಡಾದ ತಾರಾಸಿಂಗ್‌ ಚವ್ಹಾಣ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಗರ್ಭಿಣಿಯಾಗಿದ್ದ ಪೂಜಾಳನ್ನು ಮದ್ಯ ವ್ಯಸನಿ ತಾರಾಸಿಂಗ್‌ ಆಗಾಗ ಪೀಡಿಸುತ್ತಿದ್ದ ಎನ್ನಲಾಗಿದೆ. ಸೆ.6ರಂದು ಪೂಜಾಳಿಗೆ ಹಣ ಎಲ್ಲಿ ಎಂದು ಆಕೆಯ ಅತ್ತೆ ಕೇಳಿದಾಗ ಗೊತ್ತಿಲ್ಲ ಎಂದಿದ್ದಳು. ನಂತರ ಪತಿ ಮನೆಗೆ ಬಂದಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ. ಆಗ ಅತ್ತೆ ಹಾಗೂ ಆಕೆಯ ಪತಿ ಸೇರಿ ಗರ್ಭಿಣಿ ಪೂಜಾಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟ ಗಾಯಗಳಿಂದ ತೀವ್ರ ಗಾಯಗೊಂಡಿದ್ದ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪೂಜಾ ಶನಿವಾರ ಮೃತಪಟ್ಟಿದ್ದಾರೆ. ಮಗಳ ಸಾವಿಗೆ ಆಕೆಯ ಪತಿ ಹಾಗೂ ಅತ್ತೆಯೇ ಕಾರಣವೆಂದು ಪೂಜಾಳ ತಾಯಿ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next