Advertisement

ನೋಡಲು ಸುಂದರವಾಗಿಲ್ಲ ಎಂದು ಪತ್ನಿ ಮೇಲೆ ಪತಿ ಹಲ್ಲೆ

09:53 AM Mar 10, 2020 | sudhir |

ಬೆಂಗಳೂರು: ನೋಡಲು ಸುಂದರವಾಗಿಲ್ಲ. ತಾನು ಮತ್ತೂಂದು ಮದುವೆ ಮಾಡಿಕೊಳ್ಳಬೇಕೆಂದು ಪತ್ನಿ ಮೇಲೆ ಪತಿ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ವಿಜಯನಗರದ ಮಾರೇನಹಳ್ಳಿ ನಿವಾಸಿ ವಿಜಯಲಕ್ಷ್ಮೀ ಎಂಬವರು ನೀಡಿದ ದೂರಿನ ಮೇರೆಗೆ ಅವರ ಪತಿ ಶಶಿಕುಮಾರ್‌(38) ವಿರುದ್ಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿಕುಮಾರ್‌ ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಅವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಮಧ್ಯೆ ಆರೋಪಿ ಪತಿ “ನೀನು ನೋಡಲು ಸುಂದರವಾಗಿಲ್ಲ.

ನಾನು ಬೇರೆ ಮದುವೆ ಮಾಡಿಕೊಳ್ಳಬೇಕು’. ಮನೆಯಿಂದ ಹೊರ ಹೋಗುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆಕೆ ಮೇಲೆ ಆéಸಿಡ್‌ ಹಾಕುವುದಾಗಿ ಬೆದರಿಸುತ್ತಿದ್ದ. ಕೊಲೆ ಮಾಡುವುದಾಗಿ ಕಬ್ಬಿಣದ ಸರಳುಗಳನ್ನು ಮನೆಯಲ್ಲಿ ತಂದಿಟ್ಟು ಹೆದರಿಸುತ್ತಿದ್ದ. ಹಲವು ಬಾರಿ ವಿಜಯಲಕ್ಷ್ಮೀ ಪೋಷಕರು ಅಳಿಯ ಶಶಿಕುಮಾರ್‌ಗೆ ಬುದ್ದಿ ಹೇಳಿ ಸಂಧಾನ ಮಾಡಿದರೂ ಪದೇ ಪದೇ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಹೆಲ್ಮೆಟ್‌ನಲ್ಲಿ ಹಲ್ಲೆ
ಮಾ.6ರಂದು ಸಂಜೆ ವಿಜಯಲಕ್ಷ್ಮೀ ಮನೆಯಲ್ಲಿ ಕಸ ಗುಡಿಸುತ್ತಿದ್ದಾಗ ಶಶಿಕುಮಾರ್‌ ತನ್ನ ಹೆಲ್ಮೆಟ್‌ನಿಂದ ಆಕೆಯ ತಲೆ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದು, ತಲೆಯಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಮನೆಯಲ್ಲಿದ್ದ ಪೈಪ್‌ನಿಂದ ಮತ್ತೆ ಹಲ್ಲೆ ನಡೆಸಿ ಹೋಗಿದ್ದಾನೆ. ಬಳಿಕ ವಿಜಯಲಕ್ಷ್ಮೀ ಸ್ಥಳೀಯರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಪಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ. ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next