Advertisement

ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ದುಷ್ಕರ್ಮಿಗಳು: ಓರ್ವನ ಸೆರೆ

06:42 PM Apr 04, 2020 | keerthan |

ಶಿವಮೊಗ್ಗ: ಎರಡು ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರುತ್ತಿದ್ದ ದುಷ್ಕರ್ಮಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಓರ್ವನನ್ನು ಸೆರೆ ಹಿಡಿಯಲಾಗಿದೆ.

Advertisement

ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆಂಪಿನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಗಳು‌ ಎರಡು ಜಿಂಕೆಗಳನ್ನು ಭೇಟೆಯಾಡಿ ಮಾಂಸ ಮಾರಾಟ ಮಾಡಿದ್ದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಓರ್ವ ಆರೋಪಿ ಸೆರೆ ಹಿಡಿಯಲಾಗಿದ್ದು, ಇನ್ನೂ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ದಾಳಿಯ ವೇಳೆ ಎರಡು ಜಿಂಕೆಗಳ ತಲೆಗಳು, ಎರಡು ಚರ್ಮ, ಎಂಟು ಕಾಲುಗಳು ಪತ್ತೆ‌ಯಾಗಿದ್ದು, ಜೊತೆಗೆ ಕೆಂಪಿನಕೊಪ್ಪದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಇನ್ನೂ ನಾಲ್ಕು ಜಿಂಕೆಗಳ ಚರ್ಮ, 8 ಜಿಂಕೆಗಳ ಕೊಂಬುಗಳು ಹಾಗೂ ಒಂದು ಕಾಡುಕೋಣದ ಕೊಂಬು ಪತ್ತೆಯಾಗಿದೆ.

ದಾಳಿ ವೇಳೆ ಆರೋಪಿ ಜಮೀರ್ ಅಹಮದ್ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬಿದ್ದಿದ್ದು,  ಪ್ರಕರಣದ ಪ್ರಮುಖ ಆರೋಪಿ ಹುವೇದ್ ಅಹಮದ್ ಸೇರಿದಂತೆ ಚಂದ್ರು, ರಾಘು, ಸಂತೋಷ್ ಪರಾರಿಯಾಗಿದ್ದಾರೆ.

ಡಿಎಫ್ ಒ ಶಂಕರ್, ಎಸಿಎಫ್ ಬಾಲಚಂದ್ರ, ಆರ್ ಎಫ್ ಒ ಗಳಾದ ಸಂಜಯ್, ರವಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದು, ಆಯನೂರು ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next