Advertisement

ಹುಣಸೂರು: ಹಳೇ ವೈಷಮ್ಯ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ

09:48 PM Nov 03, 2022 | Team Udayavani |

ಹುಣಸೂರು: ಹಳೇ ವೈಷಮ್ಯದಿಂದ ವ್ಯಕ್ತಿಯೋರ್ವನ ಮೇಲೆ ಹಾಡುಹಗಲೇ ಹೆದ್ದಾರಿ ಬದಿಯಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮನಹಳ್ಳಿ ಬಳಿ ನಡೆದಿದೆ.

Advertisement

ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ದೊಂಬಿದಾಸರ ಕಾಲೋನಿ(ಕುಪ್ಪೆ ಗೇಟ್)ಯ ಲಕ್ಷö್ಮಯ್ಯರ ಪುತ್ರ ವೆಂಕಟೇಶ್ (50) ಎಂಬುವವರು ತೀವ್ರ ಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ದೊಂಬಿದಾಸರ ಕಾಲೋನಿಯ ಸುನಿಲ್, ಸಂಜೀವ ಇತರರಿಗೆ ಗ್ರಾಮದಲ್ಲಿರುವ ಜಮೀನು ಸಂಬಂಧ ವ್ಯಾಜ್ಯವಿದ್ದು, ನ.೩ರ ಬೆಳಿಗ್ಗೆ ಹುಣಸೂರಿನ ನ್ಯಾಯಾಲಯಕ್ಕೆ ಹಾಜರಾಗಿ ಸ್ವಗ್ರಾಮಕ್ಕೆ ಬೈಕಿನಲ್ಲಿ ವಾಪಸ್ ತೆರಳುತ್ತಿದ್ದ ವೆಂಕಟೇಶ್ ನನ್ನು ಅಡ್ಡಗಟ್ಟಿದ ಆರೋಪಿಗಳು ಮಚ್ಚಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ, ದಾರಿಹೋಕರು ಹಲ್ಲೆಕೋರರನ್ನು ತಡೆಯಲೆತ್ನಿಸಿದರಾದರೂ ಅವರ ಕಡೆ ಮಚ್ಚು ಬೀಸಿದ್ದರಿಂದ ಹೆದರಿ ದೂರ ಓಡಿ ಹೋಗಿದ್ದಾರೆ ಹಲ್ಲೆಗೊಳಗಾದ ವೆಂಕಟೇಶ್ ತೀವ್ರ ರಕ್ತ ಸ್ರಾವವಾಗಿ ಕುಸಿದು ಬೀಳುತ್ತಿದ್ದಂತೆ, ಸಾರ್ವಜನಿಕರೆದುರೇ ಆರೋಪಿಗಳು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ.

ಮಾರ್ಗದಲ್ಲಿ ಚಲಿಸುತ್ತಿದ್ದ ಸಾರ್ವಜನಿಕರು ಗಾಯಾಳುವನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಹುಣಸೂರು ನಗರ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕೆಲವರು ಮೊಬೈಲ್ ಮೂಲಕ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next