Advertisement

Hunsur: ರಸ್ತೆಬದಿಯ ಬ್ಯಾರಿಕೇಡ್‌ಗೆ ಬೈಕ್ ಢಿಕ್ಕಿಯಾಗಿ ಇಬ್ಬರು ಯುವಕರು ಮೃತ್ಯು

09:14 PM Oct 21, 2023 | Team Udayavani |

ಹುಣಸೂರು: ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಬೈಕ್ ಢಿಕ್ಕಿ ಹೊಡೆದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಸೋಮನಹಳ್ಳಿ ಬಳಿ ಶುಕ್ರವಾರ ಮದ್ಯರಾತ್ರಿ ನಡೆದಿದೆ.

Advertisement

ಕೊಡಗು ಜಿಲ್ಲೆಯ ಕುಶಾಲನಗರದ ಮಾರರ ಪುತ್ರ ಪ್ರಸನ್ನ(19)ಹಾಗೂ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಸರ್ಕಲ್‌ನ ಲೇ.ಸ್ವಾಮಿಯವರ ಪತ್ರ ಶೇಖರ್ (22)ಮೃತರು.

ಸ್ನೇಹಿತರಾದ ಇವರಿಬ್ಬರು ಮೈಸೂರು ದಸರಾದ ಲೈಟಿಂಗ್ಸ್ ವೀಕ್ಷಿಸಿ ಶುಕ್ರವಾರ ಮಧ್ಯ ರಾತ್ರಿ ಕುಶಾಲನಗರಕ್ಕೆ ಬೈಕ್‌ನಲ್ಲಿ ವಾಪಾಸಾಗುತ್ತಿದ್ದಾಗ ಸೋಮನಹಳ್ಳಿ ಬಳಿ ಕೆರೆ ಏರಿ ಮೇಲಿನ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೆ ಕೆರೆ ಅಂಗಳಕ್ಕೆ ಅಳವಡಿಸಿದ್ದ ಬ್ಯಾರಿಕೇಡರ್‌ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಪ್ರಸನ್ನ ಸಾವನ್ನಪ್ಪಿದ್ದು, ಶೇಖರ್ ಮೈಸೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಇನ್ಸ್ಪೆಕ್ಟರ್ ದೇವೇಂದ್ರ,ಎಸ್.ಐ.ಜಮೀರ್ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next