Advertisement

Hunsur: ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಭಸ್ಮ, 2 ಲಕ್ಷ ರೂ. ನಷ್ಟ

01:17 PM Mar 09, 2024 | Team Udayavani |

ಹುಣಸೂರು: ಆಕಸ್ಮಿಕ ಬೆಂಕಿ ತಗುಲಿ ಐದು ಎಕರೆ ಭತ್ತದ ಹುಲ್ಲಿನ ಬಣವೆ ಸುಟ್ಟು ಹೋದ ಘಟನೆ ಮಾ.8ರ ಶುಕ್ರವಾರ ಹನಗೋಡು ಹೋಬಳಿಯ ದಾಸನಪುರದಲ್ಲಿ ಸಂಭವಿಸಿದೆ.

Advertisement

ತಾಲೂಕಿನ ದಾಸನಪುರ ಗ್ರಾಮದ ಶಿವರಾಜು ಎಂಬವರಿಗೆ ಸೇರಿದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ಹುಲ್ಲಿನ ಬಣವೆ ಇದಾಗಿದ್ದು, ತಮ್ಮ ಮನೆಯ ಪಕ್ಕದ ಹಿತ್ತಲಿನಲ್ಲಿ ಹುಲ್ಲಿನ ಮೆದೆ ಹಾಕಿದ್ದರು. ಹುಲ್ಲಿನ ಮೆದೆಯಲ್ಲಿ ಒಮ್ಮೆಲ್ಲೆ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.

ತಕ್ಷಣ ಅಗ್ನಿಶಾಮಕ ದಳ ಮಾಹಿತಿ ನೀಡಿದ ಮೇರೆಗೆ ಆಗಮಿಸಿದರಾದರೂ ಅಷ್ಟೊತ್ತಿಗಾಗಲೇ ಸಂಪೂರ್ಣ ಸುಟ್ಟು ಹೋಗಿದೆ. ಅಕ್ಕ-ಪಕ್ಕದ ಮನೆ ಮತ್ತು ಬೇರೆ ಬಣವೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next