Advertisement

Hunsur: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆತಂಕ

06:30 PM May 11, 2024 | Team Udayavani |

ಹುಣಸೂರು: ತಾಲೂಕಿನ ಕಡೇಮನುಗನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಬೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡು 25 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

Advertisement

ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಕಡೆಮನುಗನಹಳ್ಳಿ ಗ್ರಾ.ಪಂ.ವತಿಯಿಂದ ಮನೆಗಳಿಗೆ ಪೂರೈಸುವ ನೀರಿನೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೇಳೆ ಪೈಪ್ ಒಡೆದು ಕಲುಷಿತ ನೀರು ಸೇರಿಕೊಂಡಿದ್ದು, ಆ ನೀರನ್ನೇ ಗ್ರಾಮಸ್ಥರು ಅಡುಗೆಗೆ ಹಾಗೂ ಕುಡಿಯಲು ಉಪಯೋಗಿಸಿದ ಪರಿಣಾಮ ಗ್ರಾಮದ ಅನೇಕ ಮಂದಿ ಅಸ್ವಸ್ಥಗೊಂಡಿದ್ದಾರೆ.

ಮೊದಲ ದಿನವೇ 50 ಕ್ಕೂ ಹೆಚ್ಚು ಮಂದಿಗೆ ಬೇಧಿ ಕಾಣಿಸಿಕೊಂಡು ಹುಣಸೂರು,ಮೈಸೂರು, ಪಿರಿಯಾಪಟ್ಟಣ ಹಾಗೂ ಹನಗೋಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಾದರೂ ದಿನೇ ದಿನೇ ಹಲವರಲ್ಲಿ ಬೇಧಿ ಕಾಣಿಸಿಕೊಂಡು ಸುಸ್ತು, ಅಸ್ವಸ್ಥಗೊಳ್ಳುತ್ತಲೇ ಇದ್ದಾರೆ. ಈ ಪೈಕಿ ತೀವ್ರ ನಿತ್ರಾಣಗೊಂಡಿದ್ದ ಇಬ್ಬರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹನಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ಭಾರತಿ, ಅಮಾಸೇಗೌಡ, ಶಿವಣ್ಣ, ಆನಂದ, ವಿನು, ಸಪ್ರೀತ್, ಬಲರಾಮ, ಶೀಲಾ, ಶಿವಣ್ಣ, ಶಿವು, ಪಾರ್ವತಮ್ಮ, ಪ್ರಶಾಂತ್, ಭವ್ಯ, ವಸಂತ, ಪ್ರಭಾವತಿ, ಶಾರದಮ್ಮ, ಕೃಷ್ಣೇಗೌಡ, ಪುಷ್ಪಲತಾ, ಮಂಗಳಮ್ಮ, ಪದ್ಮಮ್ಮ, ರಾಜೇಗೌಡ, ನವೀನ, ಕುಮಾರ್, ಶರತ್, ಪ್ರೀತಮ್, ಶಶಿಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಗ್ರಾಮದಲ್ಲೇ ವೈದ್ಯರ ತಂಡ ಚಿಕಿತ್ಸೆ ನಿಡಿ ನಿಗಾ ಇರಿಸಿದ್ದಾರೆ.
ಕೆಲವರು ಮನೆಗೆ ತೆರಳಿದ್ದಾರೆ. ಈ ಪೈಕಿ ಶಿವಣ್ಣ, ಭಾರತಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹನಗೋಡು ಆಸ್ಪತ್ರೆ ವೈದ್ಯಾಧಿಕಾರಿ ಡಾ ಜೋಗೇಂದ್ರನಾಥ್ ಚಿಕಿತ್ಸೆ ನೀಡುತ್ತಿದ್ದಾರೆ.

ಹುಣಸೂರು ಆಸ್ಪತ್ರೆಯಲ್ಲಿ ವಸಂತ, ಶೀಲಾ, ಜಯಮ್ಮ, ಪಿರಿಯಾಪಟ್ಟಣ ಅಸ್ಪತ್ರೆಯಲ್ಲಿ ನೀರು ಗಂಟಿ ಉಮೇಶ್ ಚಿಕಿತ್ಸೆ ಪಡೆದರೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾ, ಪ್ರಭಾವತಿ ದಾಖಲಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Advertisement

ಗ್ರಾಮದಲ್ಲಿ ದೊಡ್ಡಹೆಜ್ಜೂರು, ನೇರಳಕುಪ್ಪೆ ಆಸ್ಪತ್ರೆ ವೈದ್ಯರಾದ ಡಾ.ಸುಧಾಕರ್,ಡಾ.ಸುನಂದ, ಡಾ.ಹರ್ಷರವರು, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರು ಸೇರಿದಂತೆ ಆಶಾಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲವೆಂದು ಟಿಎಚ್‌ಒ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.

ಟ್ಯಾಂಕರ್ ಮೂಲಕ ನೀರು
ಪೈಪ್ ಒಡೆದಿರುವ ಸ್ಥಳವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿದ್ದು, ಟ್ಯಾಂಕನ್ನು ಸ್ವಚ್ಚಗೊಳಿಸಲಾಗಿದೆ. ಮೂರು ದಿನಗಳ ತನಕ ಉಪಯೋಗಿಸಲು ಸಾದ್ಯವಾಗದ ಕಾರಣ ಗ್ರಾಮಕ್ಕೆ ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಅಲ್ಲದೆ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಥಳದಲ್ಲೇ ಮೊಕ್ಕಾ ಹೂಡಿರುವ ತಾ.ಪಂ.ಇಒ ಶಿವಕುಮಾರ್ ತಿಳಿಸಿದರು. ಪಿಡಿಒ ಷಡಕ್ಷರಿ ಸ್ಥಳದಲ್ಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next