Advertisement

Hunsur ಅಕ್ರಮ ಸಂಬಂಧ: ಪ್ರೇಮಿಗಳಿಬ್ಬರು ಆತ್ಮಹತ್ಯೆ

05:29 PM Dec 20, 2023 | Team Udayavani |

ಹುಣಸೂರು: ಪ್ರೇಮಿ ಮಾಡಿದ ಎಡವಟ್ಟಿನಿಂದ ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆ ಎರಡು ಕುಟುಂಬ, ಸಮುದಾಯಗಳ ನಡುವೆ ನಡೆದ ಘರ್ಷಣೆ, ಮರ್ಯಾದೆಗೆ ಅಂಜಿದ ಮಹಿಳೆ ಮತ್ತು ಪ್ರೇಮಿ ಪ್ರತ್ಯೇಕವಾಗಿ ಸಿನಿಮೀಯ ಮಾದರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಲ್ಕುಣಿಕೆಯಲ್ಲಿ ನಡೆದಿದೆ.

Advertisement

ಕಲ್ಕುಣಿಕೆಯ ಹತ್ತಿಮರದ ಬೀದಿಯ ನಿವಾಸಿ ರಘು ಪತ್ನಿ ಶ್ರುತಿ(28) ಹಾಗೂ ಇದೇ ಬಡಾವಣೆಯ ಪಕ್ಕದ ಬೀದಿಯ ಮುರಳಿ(20) ನೇಣಿಗೆ ಶರಣಾದವರು.

ಕಳೆದ 7 ವರ್ಷಗಳ ಹಿಂದೆ ರಘು ವಿನೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆಯ ಶ್ರುತಿಗೆ ವಿವಾಹವಾಗಿದ್ದು, ಆರು ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿದ್ದಾರೆ.

ಘಟನೆ ವಿವರ: ಮುರಳಿ ಎಲೆಕ್ಟಿಶಿಯನ್‌ ಕೆಲಸ ನಿರ್ವ ಹಿಸುತ್ತಿದ್ದ, ಪಕ್ಕದ ಬೀದಿಯ ಶ್ರುತಿ ಯೊಂದಿಗೆ ಸಲುಗೆ ಬೆಳೆದು ಅಕ್ರಮ ಸಂಬಂಧ ಬೆಳೆಸಿದ್ದ, ಮುರಳಿ ಶ್ರುತಿ ಯೊಂದಿಗಿರುವ ಫೋಟೋವನ್ನು ತನ್ನ ಸ್ಟೇಟಸ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ಇದು ವಾರದ ಹಿಂದೆ ವೈರಲ್‌ ಆಗುತ್ತಿದ್ದಂತೆ ಶ್ರುತಿ ಮನೆಯಲ್ಲಿ ಹಾಗೂ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ.

ಆತಂಕಗೊಂಡ ಶ್ರುತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಶ್ರುತಿ ಆತ್ಮಹತ್ಯೆ ಘಟನೆಯಿಂದ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಶ್ರುತಿ ಆತ್ಮಹತ್ಯೆಗೆ ಮುರಳಿಯೇ ಕಾರಣವೆಂದು ಆಕೆಯ ಪತಿ ರಘು ದೂರು ನೀಡಿದ್ದರೆ, ಇತ್ತ ಮುರಳಿ ಕಡೆಯವರು ಸಹ ತಮಗೆ ರಘು ಕಡೆಯವರು ರಸ್ತೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆಂದು ಶ್ರುತಿ ಕುಟುಂಬದವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ.

Advertisement

ಒಂದೆಡೆ ಪ್ರೇಮಿಯ ಸಾವು, ಮತ್ತೊಂದೆಡೆ ಎರಡು ಕಡೆಯವರ ಘರ್ಷಣೆಯಿಂದ ಹೆದರಿದ ಎಲೆಕ್ಟ್ರಿಶಿ  ಯನ್‌ ಮುರಳಿ ಸಹ ಕೆ.ಆರ್‌.ನಗರದ ರೈಲ್ವೆ ನಿಲ್ದಾಣದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ
ಶರಣಾಗಿದ್ದಾನೆ.

ಈ ನಡುವೆ ಶ್ರುತಿಯ ಪತಿ ಕುಟುಂಬದ ಚೆಲುವಾಚಾರಿ, ರವಿ, ಮಹೇಂದ್ರರ ವಿರುದ್ಧ ನಗರ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರೆ.

ಮುರಳಿ ಸಾವಿನ ಸಂಬಂಧ ಕೆ.ಆರ್‌. ನಗರ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next