Advertisement

Hunsur;ಗೂಡ್ಸ್ ವಾಹನ-ಬೈಕ್ ಮುಖಾಮುಖಿ ಢಿಕ್ಕಿ: ಸವಾರ ಸಾವು

07:16 PM Oct 16, 2023 | Team Udayavani |

ಹುಣಸೂರು:  ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಢಿಕ್ಕಿಯಾಗಿ ಬೈಕ್ ಸವಾರ ಕೂಲಿ ಕಾರ್ಮಿಕ ತಲೆಗೆ ತೀವ್ರಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಬಿಳಿಗೆರೆ ಸಮೀಪದ ರೈಸ್ ಮಿಲ್ ಬಳಿ ಸೋಮವಾರ ನಡೆದಿದೆ.

Advertisement

ನಗರದ ಕಲ್ಕುಣಿಕೆಯ ರಂಗನಾಥ ಬಡಾವಣೆಯ ಆನಂದರ ಪುತ್ರ ಹೇಮಂತ್(26) ಮೃತ ಸವಾರ. ಕೆ.ಆರ್.ನಗರ ಕಡೆಯಿಂದ ಬೈಕ್ ನಲ್ಲಿ ಹುಣಸೂರಿಗೆ ಬರುತ್ತಿದ್ದ ವೇಳೆ ಹುಣಸೂರಿನಿಂದ ಕಳ್ಳಿಕೊಪ್ಪಲು ಕಡೆಗೆ ಹೋಗುತ್ತಿದ್ದ  ಗೂಡ್ಸ್ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next