Advertisement

Hunsur: ವನ್ಯಪ್ರಾಣಿಯ ಹೆಜ್ಜೆ ಗುರುತು ಪತ್ತೆ, ಆತಂಕದಲ್ಲಿ ರೈತರು

08:58 PM Aug 13, 2024 | Team Udayavani |

ಹುಣಸೂರು: ತಾಲೂಕಿನ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಕಾಳೆನಹಳ್ಳಿಯ ಜಮೀನಿನಲ್ಲಿ ಚಿರತೆ ಅಡ್ಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ರೈತರು ಆತಂಕದಲ್ಲಿದ್ದಾರೆ.

Advertisement

ಗ್ರಾಮದ ನಟೇಶ್ ಹಾಗೂ ಅಕ್ಕಪಕ್ಕದ ಜಮೀನಿನ ಅಲ್ಲಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿದ್ದು, ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದು ಚಿರತೆಯ ಹೆಜ್ಜೆಯಾಗಿದ್ದು, ಕಾಳೇನಹಳ್ಳಿಗೆ ಸಮೀಪದ ಬಲ್ಲೇನಹಳ್ಳಿಯಲ್ಲಿ ಚಿರತೆ, ಕೋಳಿ ಹಾಗೂ ಬೀದಿನಾಯಿಯನ್ನು ಭೇಟೆಯಾಡಿರುವ ಬಗ್ಗೆ ಮಾಹಿತಿ ಇದೆ. ಚಿರತೆ ಸೆರೆಗೆ ಎರಡು ಗ್ರಾಮಗಳ ಮಧ್ಯೆ ಬೋನ್ ಇಡಲಾಗಿದೆ ಎಂದು ಆರ್‌ಎಫ್‌ಓ ನಂದಕುಮಾರ್ ತಿಳಿಸಿದ್ದಾರೆ.

ಇದು ಚಿರತೆ ಹೆಜ್ಜೆಯೇ ಇರಬೇಕೆಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next