Advertisement

Hunsur; ಮೇಕೆಗೆ ಸೊಪ್ಪು ಕೀಳುತ್ತಿದ್ದ ವೇಳೆ ಹೆಜ್ಜೇನು ದಾಳಿ: ರೈತ ಬಲಿ

08:17 PM Oct 19, 2023 | Team Udayavani |

ಹುಣಸೂರು: ಜೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರೈತರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ತಟ್ಟೆಕೆರೆ ಗೇಟ್(ಹೊಸಕೋಟೆ)ಯಲ್ಲಿ ನಡೆದಿದೆ.

Advertisement

ಗ್ರಾಮದ ಲೇ.ಶ್ರೀನಿವಾಸ್‌ರ ಪುತ್ರ ಲಕ್ಷ್ಮಣ್(58)ಮೃತರು. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಗುರುವಾರ ಮನೆ ಬಳಿಯ ಜಮೀನಿನ ಮರವೊಂದರಲ್ಲಿ ಮೇಕೆಯ ಮೇವಿಗಾಗಿ ಸೊಪ್ಪು ಕೀಳುತ್ತಿದ್ದ ವೇಳೆ ಮರದಲ್ಲಿದ್ದ ಜೇನು ಹುಳುಗಳು ಒಮ್ಮೆಲೆ ದಾಳಿ ನಡೆಸಿವೆ. ತೀವ್ರ ಅಸ್ಪಸ್ಥಗೊಂಡಿದ್ದ ಇವರನ್ನು ತತ್ ಕ್ಷಣವೇ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next