Advertisement

Hunsur; ಆಕಸ್ಮಿಕ ಬೆಂಕಿ… ಹುಲ್ಲಿನ ಬಣವೆ ಸುಟ್ಟು ಭಸ್ಮ,2 ಲಕ್ಷ ರೂ. ನಷ್ಟ

07:11 PM Mar 08, 2024 | Team Udayavani |

ಹುಣಸೂರು; ಆಕಸ್ಮಿಕ ಬೆಂಕಿ ತಗುಲಿ ಐದು ಎಕರೆ ಭತ್ತದ ಹುಲ್ಲಿನ ಬಣವೆ ಸುಟ್ಟು ಹೋಗಿರುವ ಘಟನೆ ಶುಕ್ರವಾರ ಹನಗೋಡು ಹೋಬಳಿಯ ದಾಸನಪುರದಲ್ಲಿ ಸಂಭವಿಸಿದೆ.

Advertisement

ತಾಲೂಕಿನ ದಾಸನಪುರ ಗ್ರಾಮದ ಶಿವರಾಜುರಿಗೆ ಸೇರಿದ ಸುಮಾರು ೨ ಲಕ್ಷರೂ ಬೆಲೆ ಬಾಳುವ ಹುಲ್ಲಿನ ಬಣವೆ ಇದಾಗಿದ್ದು, ತಮ್ಮ ಮನೆಯ ಪಕ್ಕದಲ್ಲಿ ಹಿತ್ತಲಿನಲ್ಲಿ ಹುಲ್ಲಿನ ಮೆದೆ ಹಾಕಿದ್ದರು. ಹುಲ್ಲಿನ ಮೆದೆಯಲ್ಲಿ ಒಮ್ಮೆಲ್ಲೆ ದಟ್ಟ ಹೊಗೆಯೊಂದಿಗೆ ಬೆಂಕಿ

ಕಾಣಿಸಿಕೊಂಡಿದೆ. ಕೂಡಲೆ ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಆಗಮಿಸಿದರಾದರೂ ಸಂಪೂರ್ಣ ಸುಟ್ಟು ಹೋಗಿದೆ. ಅಕ್ಕ-ಪಕ್ಕದ ಮನೆ ಮತ್ತು ಬೇರೆ ಬಣವೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.

ಇದನ್ನೂ ಓದಿ: Hunasuru: ಆಟೋಗಳ ದಾಖಲಾತಿ ಸರಿಪಡಿಸಿಕೊಳ್ಳಲು 15 ದಿನ ಗಡುವು

Advertisement

Udayavani is now on Telegram. Click here to join our channel and stay updated with the latest news.

Next