Advertisement

Hunsur; ಕಾರು ಢಿಕ್ಕಿಯಾಗಿ ಆಟೋ ಚಾಲಕ ಮೃತ್ಯು: ಪ್ರಯಾಣಿಕರಿಬ್ಬರಿಗೆ ಗಾಯ

09:46 PM Sep 24, 2023 | Team Udayavani |

ಹುಣಸೂರು: ಮೈಸೂರು-ಬಂಟ್ವಾಳ ಹೆದ್ದಾರಿ-275ರ ಹುಣಸೂರು ನಗರದ ಬೈಪಾಸ್‌ನಲ್ಲಿ ಕಾರೊಂದು ಆಟೋಗೆ ಢಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟು, ಪ್ರಯಾಣಿಕರಿಬ್ಬರು ಗಾಯಗೊಂಡಿದ್ದಾರೆ.

Advertisement

ನಗರದ ಕಲ್ಕುಣಿಕೆ ವಾಸಿ ದಾಸಪ್ಪರ ಪುತ್ರ ಶ್ರೀನಿವಾಸ್(55)ಮೃತ ಅಟೋ ಚಾಲಕ. ಆಟೋದಲ್ಲಿದ್ದ ಮಂಗಳಮುಖಿಯರಾದ ಲಕ್ಷ್ಮೀ ಹಾಗೂ ಎಂಜೆಲ್ ತೀವ್ರ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೈಪಾಸ್‌ನ ಮಿನಿ ವಿಧಾನಸೌಧದ ಮುಂದೆ ಘಟನೆ ಸಂಭವಿಸಿದ್ದು, ಶ್ರೀನಿವಾಸ್ ಆಟೋ ಪ್ರಯಾಣಿಕರಿಬ್ಬರನ್ನು ಕೂರಿಸಿಕೊಂಡು ತಹಶೀಲ್ದಾರ್ ಕಚೇರಿ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೈಸೂರು ಕಡೆಗೆ ಬರುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿ ಚಾಲಕ ಶ್ರೀನಿವಾಸ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಎಂ.ಕೆ.ಮಹೇಶ್, ಇನ್ಸ್ ಪೆಕ್ಟರ್ ದೇವೇಂದ್ರ, ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next