Advertisement

Hunsur: ಹೇರ್ ಆಯಿಲ್ ಅಂಗಡಿಯಲ್ಲಿ ಉಡ ಸಹಿತ ಆರೋಪಿ ಬಂಧನ

09:56 PM Aug 29, 2024 | Team Udayavani |

ಹುಣಸೂರು: ಜೀವಂತ ಉಡವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ವೇಳೆ ಅರಣ್ಯ ಸಂಚಾರಿ ದಳದ ಸಿಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರದ  ದೇವಕಾರಿ ಬಂಧಿತ ಆರೋಪಿ.

Advertisement

ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ಆಜಾದ್‌ನಗರ ಗೇಟ್‌ನ ತುಳಸಿ ಆದಿವಾಸಿ ನೀಲಾಂಬರಿ ಹೇರ್ ಆಯಿಲ್ ಅಂಗಡಿಯ ಮಾಲಕ ದೇವಕಾರಿ ಎಂಬಾತ ತನ್ನ ಅಂಗಡಿಯಲ್ಲಿ ಉಡವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಡಿಸಿಎಫ್ ಚಂದ್ರಶೇಖರಗೌಡ ಸಿ.ಪಾಟೀಲ್ ಮಾರ್ಗದರ್ಶನದಲ್ಲಿ ಎಸಿಎಫ್ ರುದ್ರೇಶ್, ಆರ್.ಎಫ್.ಓ.ಕೆ.ಸುರೇಂದ್ರ ನೇತೃತ್ವದ ತಂಡ ದಾಳಿ ನಡೆಸಿ, ಜೀವಂತ ಉಡ ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಉಡವನ್ನು ನಾಗರಹೊಳೆ ಉದ್ಯಾನದಲ್ಲಿ ಬಂಧ ಮುಕ್ತಗೊಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಮೋಹನ್, ಮುತ್ತುರಾಜ್, ಸಿಬಂದಿ ಮಿಮಾಮ್‌ಸಾಬ್ ಸಾಗರಿ, ತಿರುಪತಿಪೂಜಾ, ವೆಂಕಟೇಶ್ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next