Advertisement

ಮಗಳ ಮೇಲೆ ಲೈಂಗಿಕ ದೌರ್ಜನ್ಯ : ಅವಮಾನ ತಾಳಲಾರದೆ ತಂದೆ ನೇಣಿಗೆ ಶರಣು

09:23 PM Jun 08, 2022 | Team Udayavani |

ಹುಣಸೂರು : ಅಪ್ರಾಪ್ತ ವಯಸ್ಕ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ಪ್ರಶ್ನಿಸಿದ ಪೋಷಕರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದರಿಂದ ಅವಮಾನ ತಾಳಲಾರದೆ ನತದೃಷ್ಟ ಬಾಲಕಿ ತಂದೆ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಉಂಡವಾಡಿಯಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಉಂಡವಾಡಿ ಗ್ರಾಮದ ಮಹದೇವ (55) ಆತ್ಮಹತ್ಯೆ ಮಾಡಿಕೊಂಡವರು.

ಮಹದೇವರ ಪಕ್ಕದ ಮನೆಯ ಸ್ವಾಮಿಗೌಡರ ಪುತ್ರ ಶಿವರಾಜು ಎಂಬಾತನ ವಿರುದ್ದ ಪೋಕ್ಸೋ ಕಾಯ್ದೆ ಹಾಗೂ ಶಿವರಾಜು, ತಂದೆ ಸ್ವಾಮಿಗೌಡ ಇವರ ಪತ್ನಿ ಶೈಲಜಾ ವಿರುದ್ದವೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ:
ಮಹದೇವ ರವರ ಪತ್ನಿ ಶೀಲಾವತಿ ನೀಡಿರುವ ದೂರಿನಂತೆ ಜೂ. 06 ರಂದು ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಮನೆಯಲ್ಲಿ ಪುತ್ರಿ ಒಬ್ಬಳೇ ಓದಿಕೊಳ್ಳುತ್ತಿದ್ದ ವೇಳೆ ನಮ್ಮ ಪಕ್ಕದ ಮನೆಯ ಸ್ವಾಮಿಗೌಡ ರವರ ಮಗ ಶಿವರಾಜು ಬಂದಿದ್ದು, ನಮ್ಮನ್ನು ನೋಡಿ ಓಡಿ ಹೋಗಿರುತ್ತಾನೆ.

ಇದನ್ನೂ ಓದಿ :ಉಪ್ಪಿನಂಗಡಿ ; ಶಾಲೆಗೆ ಬಿಡುವ ನೆಪದಲ್ಲಿ ಲಾಡ್ಜ್ ಗೆ ಕರೆದೊಯ್ದು ಬಾಲಕಿ‌ಯ ಅತ್ಯಾಚಾರ 

Advertisement

ಈ ವಿಚಾರದ ಬಗ್ಗೆ ಮಾತನಾಡಲು ರಾತ್ರಿ 8ರ ವೇಳೆಯಲ್ಲಿ ನಾನು ಮತ್ತು ನನ್ನ ಗಂಡ ಮಹದೇವರವರು ಪಕ್ಕದ ಮನೆಯ ಸ್ವಾಮಿಗೌಡ ರವರ ಮನೆಗೆ ಹೋದಾಗ ಸ್ವಾಮಿಗೌಡ, ಅವನ ಹೆಂಡತಿ ಶೈಲಜಾ ಮತ್ತು ಅವರ ಮಗ ಶಿವರಾಜ್ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೊಮ್ಮೆ ನನ್ನ ಮನೆ ಹತ್ತಿರ ಬಂದರೆ ನಿನ್ನನ್ನು ಕೊಲೆ ಮಾಡುತ್ತೇನೆ, ಒಂದು ಗತಿ ಕಾಣಿಸುತ್ತೇನೆ. ನೀನು ಬದುಕಿರುವುದಕ್ಕಿಂತ ಸಾಯುವುದೇ ಮೇಲು ಎಂದು ಗಲಾಟೆ ಮಾಡಿರುತ್ತಾರೆ.

ಈ ವಿಷಯವಾಗಿ ಮನನೊಂದ ನನ್ನ ಗಂಡ ಮಹಾದೇವ ಮಂಗಳವಾರ ಸಂಜೆ ನಮ್ಮ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಮಗಳ ಮೇಲೆಯೂ ಸಹ ಮೇಲೆ ಶಿವರಾಜ್ ದೌರ್ಜನ್ಯವೆಸಗಿದ್ದು. ಪ್ರಶ್ನಿಸಲು ಹೋದ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ ನನ್ನ ಯಜಮಾನ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಸ್ವಾಮಿಗೌಡ, ಪತ್ನಿಶೈಲಜಾ, ಪುತ್ರ ಶಿವರಾಜುವಿನ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಮೃತ ಮಹದೇವರ ಪತ್ನಿ ಶೀಲಾವತಿ ನೀಡಿದ ದೂರಿನ ಮೇರೆಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next