Advertisement

Hunasuru: ಕುಡಿದ ಅಮಲಿನಲ್ಲಿ ವೃಷಣವನ್ನೇ ಕತ್ತರಿಸಿಕೊಂಡ ಭೂಪ!!

09:19 PM Apr 08, 2023 | Team Udayavani |

ಹುಣಸೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊರ್ವ ತನ್ನ ವೃಷಣವನ್ನೇ ಕೊಯ್ದುಕೊಂಡು ವಿಕೃತಿ ಮೆರೆದಿರುವ ಘಟನೆ ನಡೆದಿದೆ.

Advertisement

ಹುಣಸೂರು ತಾಲೂಕಿನ ತೊಂಡಾಳು ಗ್ರಾಮದ ರಾಜಶೆಟ್ಟಿ(41) ವೃಷಣ ಕತ್ತರಿಸಿಕೊಂಡಾತ, ಇದೀಗ ಕೆ.ಆರ್.ಆಸ್ಪತ್ರೆಯ ಚುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈತ ಪತ್ನಿ ನಿಧನ ನಂತರ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ, ಕುಡಿತಕ್ಕೆ ದಾಸನಾಗಿದ್ದ ರಾಜಶೆಟ್ಟಿ, ಕೆ.ಆರ್.ನಗರ ಬಾರ್‌ನಲ್ಲಿ ಮದ್ಯ ಸೇವಿಸಿ ಚಾಕುವಿನಿಂದ ತನ್ನ ವೃಷಣವನ್ನು ಕೊಯ್ದುಕೊಂಡು ಅಸ್ಪಸ್ಥನಾಗಿದ್ದನ್ನು ಕಂಡವರು ಕೆ.ಆರ್.ನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಕೆ.ಆರ್.ಆಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು ಚೇತರಿಸಿಕೊಳ್ಳುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next