Advertisement

Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು

05:40 PM Oct 22, 2024 | Team Udayavani |

ಹುಣಸಗಿ: ತಾಲೂಕಿನ ಬೆಂಚಿಗಡ್ಡಿ ಬಳಿ ಕೃಷ್ಣಾನದಿಯಲ್ಲಿ(ಹೈಡ್ರೋ ವಿದ್ಯುತ್ ಉತ್ಪಾದನಾ ಕೇಂದ್ರ) ಕಾಲುಜಾರಿ ಇಬ್ಬರು ಯುವಕರು ಮೃತಪಟ್ಟ ಘಟನೆ ಅ.22ರ ಮಂಗಳವಾರ ನಡೆದಿದೆ.

Advertisement

ನಾಗಲ್ಯಾಂಡ್ ಮೂಲದ ಆಲಮ್ (23), ವಿಜಯಪುರ ಮೂಲದ ಮಾರುತಿ ಮುತ್ತಗಿ(24) ಮೃತ ದುರ್ದೈವಿಗಳು.

ಅ.21ರ ಸೋಮವಾರ ಕೃಷ್ಣಾನದಿಯಲ್ಲಿ ಸ್ನಾನಕ್ಕಾಗಿ ತೆರಳಿದಾಗ ನಾಗಲ್ಯಾಂಡ್ ಮೂಲದ ಆಲಮ್ ಎಂಬ ಯುವಕ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಪಕ್ಕದಲ್ಲಿಯೇ ಇದ್ದ ವಿಜಯಪುರ ಜಿಲ್ಲೆಯ ಮುತ್ತಗಿ ಗ್ರಾಮದ ಮಾರುತಿ ಎಂಬಾತನು ರಕ್ಷಣೆಗೆ ನೀರಿಗೆ ಇಳಿದಾಗ ಇಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಅ.22ರ ಮಂಗಳವಾರ ಅಗ್ನಿಶ್ಯಾಮಕ ಸಿಬ್ಬಂದಿ ಶೋಧ ಕಾರ್ಯಚರಣೆ   ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇಬ್ಬರು ಹೈಡ್ರೋ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಸೆಕ್ಯೂರಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Advertisement

ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next